Advertisement

ಮಕ್ಕಳ ಪೌಷ್ಟಿಕಾಂಶಕ್ಕೂ ಆಧಾರ್‌!

08:29 AM Dec 23, 2017 | Team Udayavani |

ಹೊಸದಿಲ್ಲಿ: ರಾಷ್ಟ್ರೀಯ ಪೌಷ್ಟಿಕಾಂಶ ಮಿಷನ್‌ನ ಯೋಜನೆಯಡಿಯಲ್ಲಿ ಆಹಾರ ಪಡೆಯುವ ಮಕ್ಕಳೂ ಇನ್ನು ಮುಂದೆ ಆಧಾರ್‌ ಕಡ್ಡಾಯವಾಗಿ ಹೊಂದಿರಬೇಕು! ಈ ಕುರಿತು ಶುಕ್ರವಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಹಾಯಕ ಸಚಿವ ವಿರೇಂದ್ರ ಕುಮಾರ್‌ ಲೋಕಸಭೆಗೆ ಮಾಹಿತಿ ನೀಡಿದರು. ಸರಕಾರದ ಮಹತ್ವಾ ಕಾಂಕ್ಷೆಯ ಈ ಸೇವೆಯ ಫ‌ಲಾನುಭವಿ ಆಗು ವವರು ಆಧಾರ್‌ ಹೊಂದಿರಬೇಕು. ಇದರಿಂದ ಸೇವಾ ಪ್ರಕ್ರಿಯೆಗೂ ಸಾಕಷ್ಟು ಸಹಕಾರಿ ಆಗಲಿದೆ ಎಂದು ತಿಳಿಸಿದ್ದಾರೆ. ಹತ್ತಾರು ದಾಖಲೆ ಗಳನ್ನು ನೀಡುವ ಬದಲು ಆಧಾರ್‌ ಲಗತ್ತಿಸುವುದು ಉತ್ತಮ. ಇದರಿಂದ ಫ‌ಲಾನುಭವಿಯ ಎಲ್ಲಾ ದಾಖಲೆಗಳೂ ಲಭ್ಯ ಆಗುವುದರ ಜತೆಗೆ  ಅವರಿಗೆ ಸಿಗಬೇಕಾದ ಸವಲತ್ತುಗಳ ಬಗ್ಗೆ ತಿಳಿಯಲೂ  ಸಾಧ್ಯವಾಗಲಿದೆ ಎಂದಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next