Advertisement

Raichur ಸರಕಾರಿ ಕೆಲಸ ಸಿಗದೆ ಯುವಕ ಆತ್ಮಹತ್ಯೆ

11:38 PM Aug 25, 2023 | Team Udayavani |

ರಾಯಚೂರು: ಸರಕಾರಿ ನೌಕರಿ ಸಿಗದೆ ನೊಂದ ಯುವಕನೊಬ್ಬ “ಆಡಳಿತ ವ್ಯವಸ್ಥೆಧಿಕ್ಕಾರ’ ಎಂದು ಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ದೇವದುರ್ಗದಲ್ಲಿ ನಡೆದಿದೆ.

Advertisement

ಜ್ಞಾನಗಂಗಾ ಹಿರಿಯ ಪ್ರಾಥಮಿಕ ಶಾಲಾವರಣದ ಮರಕ್ಕೆ ತಾಲೂಕಿನ ಚಿಕ್ಕಬೂದುರು ಗ್ರಾಮದ ಯುವ ಚನ್ನಬಸವ (25) ನೇಣಿಗೆ ಶರಣಾಗಿದ್ದಾನೆ. 2022ರಲ್ಲಿ ನಡೆದ ಶಿಕ್ಷಕರ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಆಯ್ಕೆಯಾಗಿದ್ದು, ಪಟ್ಟಿಯಲ್ಲಿ ಹೆಸರೂ ಬಂದಿತ್ತು. ಆದರೆ ಕೊನೆಕ್ಷಣದಲ್ಲಿ ಹೆಸರು ಕೈಬಿಟ್ಟು ಹೋಗಿತ್ತು ಎನ್ನಲಾಗುತ್ತಿದೆ. ಮತ್ತೆ ಪರೀಕ್ಷೆ ಎದುರಿಸಿದರೂ ಪಾಸಾಗಲಿಲ್ಲ. ಇದರಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮರಣಪತ್ರ ಬರೆದಿರುವ ಚನ್ನಬಸವ, ಆಡಳಿತ ವ್ಯವಸ್ಥೆಗೆಧಿಕ್ಕಾರ ಎಂದು ಉಲ್ಲೇಖಿಸಿದ್ದಾನೆ. ಇದು ನನ್ನ ಸ್ವಂತ ನಿರ್ಧಾರ. ಯಾರ ವಿರುದ್ಧವೂ ದೂರು ದಾಖಲಿಸಬಾರದು. ನನ್ನ ತಂದೆ-ತಾಯಿ ಅನಕ್ಷರಸ್ಥರಾಗಿದ್ದು, ಅವರಿಂದ ದೂರು ಪಡೆದುಕೊಳ್ಳಬಾರದು ಎಂದು ಉಲ್ಲೇಖೀಸಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next