Advertisement

ಅಂಗವಿಕಲ ಯುವಕನ ವರಿಸಿದ ಹಾಲಾಡಿಯ ಯುವತಿ

08:05 AM Mar 20, 2018 | Team Udayavani |

ಕುಂದಾಪುರ: ಮನೆಯವರ ವಿರೋಧದ ನಡುವೆಯೂ ಹಾಲಾಡಿಯ ಯುವತಿಯೊಬ್ಬರು ಸೋಮವಾರ  ಅಂಗವಿಕಲ  ಯುವಕನನ್ನು ಮದುವೆಯಾಗಿದ್ದಾರೆ. 

Advertisement

ಸಾಲಿಗ್ರಾಮದ ಮೊಗವೀರ ಸಮುದಾಯದ ಶೋಭನ್‌ ಬಿ. (30) ಅವರ ಜತೆ ಹಾಲಾಡಿಯ ಅದೇ ಸಮುದಾಯದ ಸಂಗೀತಾ (24) ಅವರ ವಿವಾಹವು ಕುಂದಾಪುರದ ಮಹಿಳಾ ಸಾಂತ್ವನ ಕೇಂದ್ರದ ಕಚೇರಿಯಲ್ಲಿ, ಕೇಂದ್ರದ ಮುಖ್ಯಸ್ಥೆ ರಾಧಾದಾಸ್‌  ಅವರ ನೇತೃತ್ವದಲ್ಲಿ  ನೆರವೇರಿತು. ಭೋಜರಾಜ್‌ ಹಾಗೂ ವಿಮಲಾ ದಂಪತಿಯ ಪುತ್ರ ಶೋಭನ್‌ ಅವರು ಎಸ್‌ಆರ್‌ಎಂ ಎನ್ನುವ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದು, ಹಾಲಾಡಿಯ  ಮಹಾಬಲ ಹಾಗೂ ಗುಲಾಬಿ ದಂಪತಿಯ ಪುತ್ರಿ ಸಂಗೀತಾ ಅವರು ಬಿ.ಕಾಂ. ಪದವೀಧರೆಯಾಗಿದ್ದಾರೆ. 

ಇವರಿಬ್ಬರೂ  ಕಳೆದ ಒಂದೂವರೆ ವರ್ಷದಿಂದ ಪ್ರೀತಿಸುತ್ತಿದ್ದು, ಯುವಕ  ಅಂಗವಿಕಲ ಎನ್ನುವ ಕಾರಣಕ್ಕೆ ಯುವತಿ ಮನೆಯವರಿಂದ ವಿರೋಧ ವ್ಯಕ್ತವಾಗಿತ್ತು. 

ಮಹಿಳಾ ಸಾಂತ್ವನ ಕೇಂದ್ರ ಇವರಿಗೆ ಮಾನಸಿಕ ಧೈರ್ಯ ತುಂಬುವ ಮೂಲಕ ನವಜೀವನಕ್ಕೆ  ಕಾಲಿಡುವಂತೆ ಮಾಡಿದೆ. ಸ್ವ ಇಚ್ಛೆಯಿಂದ ವಿವಾಹವಾಗಿರುವುದಾಗಿ ಯುವತಿ ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next