Advertisement

ಸಿಗಂದೂರು : ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯ ರಕ್ಷಣೆ

08:46 PM Jun 27, 2021 | Ganesh Hiremath |

ಶಿವಮೊಗ್ಗ : ಸಾಗರ ತಾಲೂಕು ಶರಾವತಿ ನದಿಯ ಸಿಗಂದೂರು ಲಾಂಚ್ ನಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯನ್ನು ಕೂಡಲೇ ಲಾಂಚ್ ನಲ್ಲಿದ್ದ ಯುವಕರು ರಕ್ಷಿಸಿರುವ ಘಟನೆ ಇಂದು ( ಜೂನ್ ) ನಡೆದಿದೆ. ಹಾವೇರಿ ತಾಲ್ಲೂಕಿನ ಹಿರೇಕೆರೂರು ಗ್ರಾಮದ ರೇಣುಕಾ(46) ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ.

Advertisement

ಇಂದು ಸಂಜೆ ಲಾಂಚ್ ಸಂಚರಿಸುವಾಗ ಹಿನ್ನೀರಿಗೆ ಧುಮುಕಿದ್ದಳು. ಕೂಡಲೇ ಲಾಂಚ್ ನಲ್ಲಿದ್ದ ಯುವಕರು ಲೈಫ್ ಜಾಕೇಟ್ ಸಹಾಯದಿಂದ ಹಿನ್ನೀರಿಗೆ ಧುಮುಕಿ ಮಹಿಳೆಯನ್ನು ರಕ್ಷಿಸಿದ್ದಾರೆ.

ಹಿನ್ನೀರು ಭಾಗದ ಸುಧಾಕರ್, ಪ್ರಕಾಶ್ ಬೆಳಮಕ್ಕಿ, ಪ್ರಶಾಂತ್ ಸಿಗಂದೂರ ಯುವಕರ ತಂಡ ಮಹಿಳೆಯನ್ನು ರಕ್ಷಿಸಿದೆ.  ಮಹಿಳೆ‌ ನೀರಿಗೆ ಬಿಳುತ್ತಿದ್ದಂತೆ ಆಕೆಯನ್ನು ಉಳಿಸುವ ಎಲ್ಲ ಪ್ರಯತ್ನ‌ ನಡೆಸಲಾಯಿತು. ಮಹಿಳೆಗೆ ಟ್ಯೂಬ್ ಗಳನ್ನು ಎಸೆಯಲಾಯಿತು. ಆದರೆ ಮಹಿಳೆ ಟ್ಯೂಬ್ ಗಳನ್ನು ಹಿಡಿದುಕೊಳ್ಳಲು ಸಾಧ್ಯವಾಗದಿದ್ದರಿಂದ ಯುವಕರೇ ನೀರಿಗೆ ಜಿಗಿದು ಮಹಿಳೆಯನ್ನು ರಕ್ಷಿಸಿದ್ದಾರೆ.

ಇನ್ನು ಕೌಟುಂಬಿಕ ಕಾರಣಗಳಿಂದ‌ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದರು ಎನ್ನಲಾಗುತ್ತಿದೆ. ಈ ಸಂಬಂಧ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next