Advertisement

ಸ್ಕೂಲ್ ಬಸ್ ನ ಚಕ್ರದ ಅಡಿಗೆ ಸಿಲುಕಿ‌ ಮೂರು ವರ್ಷದ ಬಾಲಕಿ ಮೃತ್ಯು

03:22 PM Jul 08, 2023 | Team Udayavani |

ಕುಷ್ಟಗಿ: ಸ್ಕೂಲ್ ಗೆ ಹೊರಟ ಅಕ್ಕ ನಿಗೆ ಟಾಟಾ ಹೇಳಲು ಬಂದಿದ್ದ ಮೂರು ವರ್ಷದ ಬಾಲಕಿ, ಸ್ಕೂಲ್ ಬಸ್ ನ ಚಕ್ರದ ಅಡಿಗೆ ಸಿಲುಕಿ‌ ದಾರುಣ ಸಾವಿಗೀಡಾದ ಘಟನೆ ಕುಷ್ಟಗಿ ತಾಲೂಕಿನ ಗೋತಗಿ ಗ್ರಾಮದಲ್ಲಿ ನಡೆದಿದೆ.

Advertisement

ಗೋತಗಿ ಗ್ರಾಮದ ಬಸವರಾಜ ಬಾವಿಕಟ್ಟಿ ಮೂವರು ಪುತ್ರಿಯರಲ್ಲಿ ಇಬ್ಬರು ಪುತ್ರಿಯರನ್ನು 5 ಕಿ.ಮೀ. ದೂರದ ಹಿರೇ ಓತಗೇರಿ ಗ್ರಾಮದ ( ಹುನಗುಂದ ತಾಲೂಕು) ಜ್ಞಾನಮಂದಿರ ಶಾಲೆಗೆ ಸೇರಿಸಿದ್ದರು. ಎಂದಿನಂತೆ ಶನಿವಾರ 7 ಗಂಟೆಗೆ ಗೋತಗಿ ಗ್ರಾಮದ ಶಾಲಾ‌ ಮಕ್ಕಳನ್ನು ಹತ್ತಿಸಿಕೊಳ್ಳಲು ಬಂದಿತ್ತು. ತನ್ನ ಅಕ್ಕಂದಿರುಗಳಿಗೆ ಟಾಟಾ ಹೇಳಲು ಬಾಲಕಿ ಚೈತ್ರಾ ಬಂದಿದ್ದಳು.

ಈ ಬಾಲಕಿಯರಿಗೆ ತಂಗಿ ಚೈತ್ರಾ ಹಿಂಬಾಲಿಸಿರುವುದು ಗೊತ್ತಿರಲಿಲ್ಲ ಹಾಗೆಯೇ ಅವಸರದಿಂದ ಸ್ಕೂಲ್ ಬಸ್ಸನ್ನೇರಿದ್ದರು. ಬಸ್ಸಿನ ಚಾಲಕ ಮಿರರ್ ಗಮನಿಸದೇ ಬಸ್ ಬಿಟ್ಟಿದ್ದರಿಂದ ಕೆಳಗೆ ನಿಂತಿದ್ದ ಬಾಲಕಿಯ ಮೇಲೆ ಹರಿದ ಬಸ್ ಯಮ ಸ್ವರೂಪಿಯಾಗಿ ಕ್ಷಣಾರ್ಧದಲ್ಲಿ ಬಾಲಕಿ‌ಯ ಪ್ರಾಣ ಹಾರಿ ಹೋಗಿದೆ.

ಸ್ಥಳೀಯರು ರೊಚ್ಚಿಗೆದ್ದು ಚಾಲಕ ಹಾಗೂ ಕ್ಲೀನರ್ ಗೆ ಧರ್ಮದೇಟು ನೀಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಾಲಕಿ ಚೈತ್ರಾಳ‌ ಶವವನ್ನು ಕುಷ್ಟಗಿ ಸರ್ಕಾರಿ ಆಸ್ಪತ್ರೆಗೆ ತರಲಾಗಿದೆ. ಸ್ಕೂಲ್ ಬಸ್ ಚಾಲಕ ಪ್ರವೀಣ ಕಂದಕೂರು ಹಾಗೂ ಕ್ಲೀನರ್ ವಿರುದ್ದ ಕುಷ್ಟಗಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next