Advertisement

ಹಾವೇರಿ: ಮುಖ್ಯಮಂತ್ರಿಗಳ ಕಾರ್ಯಕ್ರಮದಲ್ಲಿ ಕಳ್ಳರ ಕೈಚಳಕ

02:20 PM Aug 29, 2021 | Team Udayavani |

ಬ್ಯಾಡಗಿ: ಮುಖ್ಯಮಂತ್ರಿ ಬಸವ‌ರಾಜ ಬೊಮ್ಮಾಯಿ ಅವರ ಕಾರ್ಯಕ್ರಮದಲ್ಲಿ ಕಳ್ಳರು ತಮ್ಮ ಕೈಚ‌ಳಕ ತೋರಿಸಿದ್ದಾರೆ.

Advertisement

ಬ್ಯಾಡಗಿ ಎಪಿಎಂಸಿ ನಿರ್ದೇಶಕ ‌ ಡಿ.ಎನ್‌.ತೋಟದ ಅವರ ಜೇಬು ಕ‌ತ್ತರಿಸಿ 6 ಸಾವಿರ ರೂ. ದೋಚಿರುವ ಪ್ರಕರ‌ಣ ಶನಿವಾರ ‌ನಡೆದಿದೆ.

ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿಕೊಂಡು ನಡೆಯುವ ಕಾರ್ಯಕ್ರಮದಲ್ಲಿ ಕಳ್ಳರ ಕೈಚಳಕ ಹೊಸದೇನಲ್ಲ. ಮಾಜಿ ಸಚಿವ ಸಿ.ಎಂ.ಉದಾಸಿ ಅವರ ‌ ಅಂತ್ಯಕ್ರಿಯೆ ಸೇರಿದಂತೆ ಕೇಂದ್ರ ಸಚಿವರು, ಇನ್ನಿತರೆ ಕಾರ್ಯಕ್ರಮಗಳಲ್ಲಿ ಮೊಬೈಲ್‌, ನಗದು ಕಳ್ಳತನ ಮಾಡಿರುವ ಪ್ರಕರಣಗಳು ವರದಿಯಾಗಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next