Advertisement

Prayagraj: ಕಂಡಕ್ಟರ್‌ ಕತ್ತು ಸೀಳಿ ಕೊಲೆಗೆ ಯತ್ನಿಸಿದ ವಿದ್ಯಾರ್ಥಿ!

12:21 AM Nov 26, 2023 | Team Udayavani |

ಪ್ರಯಾಗ್‌ರಾಜ್‌: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಟಿಕೆಟ್‌ ವಿಚಾರದಲ್ಲಿ ಜಗಳ ಉಂಟಾ ಗಿದ್ದು, ಬಸ್‌ ನಿರ್ವಾಹಕರೊಬ್ಬರ ಮೇಲೆ ಎಂಜಿನಿ ಯರಿಂಗ್‌ ವಿದ್ಯಾರ್ಥಿ ಲಾರೆಬ್‌ ಹಶ್ಮಿ ಎಂಬಾತ ಹರಿತ ಆಯುಧದಿಂದ ಹಲ್ಲೆ ಮಾಡಿದ್ದಾನೆ. ಪ್ರಕರಣ ಸಂಬಂಧ ಆರೋಪಿಯನ್ನು ಬಂಧಿಸಲಾಗಿದೆ.

Advertisement

ಈ ಬಗ್ಗೆ ಬಂಧಿತ ಲಾರೆಬ್‌ ಹಶ್ಮಿ ಅಪ್‌ಲೋಡ್‌ ಮಾಡಿದ್ದಾನೆ ಎಂದು ಹೇಳಲಾಗಿರುವ ವೀಡಿಯೋ ವೈರಲ್‌ ಆಗಿದೆ. ಅದರಲ್ಲಿ ಆತ “ಬಸ್‌ ನಿರ್ವಾಹಕ ಮುಸ್ಲಿಂ ಸಮುದಾಯದವರನ್ನು ಟೀಕಿಸುತ್ತಿದ್ದ. ಹೀಗಾಗಿ ನಾನೇ ಆತನ ಮೇಲೆ ದಾಳಿ ನಡೆಸಿದೆ’ ಎಂದು ಹೇಳಿದ್ದಾನೆ. ನಿರ್ವಾಹಕನ ಮೇಲೆ ದಾಳಿ ನಡೆಸಿ ಆತ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದ. ಆದರೆ ಪೊಲೀಸರು ಅವನ ಕಾಲಿಗೆ ಗುಂಡು ಹಾರಿಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಸ್‌ನ ನಿರ್ವಾಹಕ ಹೃಷಿಕೇಶ್‌ ವಿಶ್ವಕರ್ಮ ಮತ್ತು ಲಾರೆಬ್‌ ಹಶ್ಮಿ ಟಿಕೆಟ್‌ ದರದ ವಿಚಾರಕ್ಕೆ ಸಂಬಂಧಿಸಿದಂತೆ ಜಗಳವಾಡಿದ್ದರು. ಅದು ಕೈಮೀರಿ ಹೋದ ಸಂದರ್ಭದಲ್ಲಿ ಹರಿತವಾದ ಆಯುಧದಿಂದ ನಿರ್ವಾಹಕನ ಮೇಲೆ ದಾಳಿ ನಡೆಸಿದ್ದಾನೆ. ಏನಾಗುತ್ತದೆ ಎಂದು ತಿಳಿಯುವಷ್ಟರಲ್ಲಿ ಆತ ಬಸ್‌ನಿಂದ ಇಳಿದು ಕಾಲೇಜು ಸೇರಿಕೊಂಡಿದ್ದ.

 

Advertisement

Udayavani is now on Telegram. Click here to join our channel and stay updated with the latest news.

Next