Advertisement

ಜನ ಜಾಗೃತಿಗೆ ಬೀದಿ ನಾಟಕ ಪ್ರದರ್ಶನ

02:06 PM Feb 02, 2020 | Suhan S |

ಹಾವೇರಿ: ರಟ್ಟಿಹಳ್ಳಿ ತಾಲೂಕಿನ ಕಣವಿ ಸಿದ್ಧಗೇರಿ ಗ್ರಾಮದ ಸಿದ್ಧಾರೂಢ ದೇವಸ್ಥಾನದ ಆವರಣದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಗ್ರಾಮ ಸಂಪರ್ಕ ಕಾರ್ಯಕ್ರಮದಲ್ಲಿ ಜನಪದ ಗೀತೆಗಳು ಬೀದಿ ನಾಟಕ ಪ್ರದರ್ಶನ ಮಾಡುವುದರ ಮೂಲಕ ಸರಕಾರದ ವಿವಿಧ ಯೋಜನೆಗಳ ಕುರಿತು ಜಾಗೃತಿ ಮೂಡಿಸಲಾಯಿತು.

Advertisement

ಕನ್ನಡತಿ ಕಲಾ ತಂಡದ ಲಲಿತಾ ಪಾಟೀಲ ಅವರಿಂದ ನಾಟಕ ಪ್ರದರ್ಶನ, ದುರ್ಗಾದೇವಿ ಸಂಸ್ಕೃತ ಜನಪದ ಕಲಾ ತಂಡದ ರೇಣುಕಾ ಛಲವಾದಿ ತಂಡದವರು ಕೆಂದ್ರ ಮತ್ತು ರಾಜ್ಯ ಸರಕಾರದಿಂದ ರೈತರಿಗೆ ಸಿಗುವಪ್ರಯೋಜನೆಗಳು, ಸಹಾಯಧನ ಹಾಗೂ ಗ್ರಾಮದಲ್ಲಿ ನೆರೆ ಸಂತ್ರಸ್ತರು, ನೇಕಾರರು, ಮೀನುಗಾರರಿಗೆ ಸಹಕಾರ, ಕುಟುಂಬದವರಿಗೆ ಸರಕಾರದಿಂದ ಸಿಗುವ ಸಹಾಯಧನ ಹಾಗೂ ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ ಯೋಜನೆಯಡಿ ರೈತರಿಗೆಸಿಗುವ ಸೌಲಭ್ಯಗಳ ಬಗ್ಗೆ ಸಂಬಂಧಿಸಿದ ಯೋಜನೆಗಳ ಕುರಿತು ಜನಪದ ಜಾಗೃತಿ ಗೀತೆಗಳನ್ನು ಹೇಳುವುದರ ಮೂಲಕ ಮಹಿಳಾ ತಂಡದವರು ಅರಿವು ಮೂಡಿಸಿದರು.

ಗ್ರಾಪಂ ಸಿಬ್ಬಂದಿ ಜಗದೀಶ ಮಾತನಾಡಿ, ವಾರ್ತಾ ಇಲಾಖೆಯಿಂದ ಬಂದಿರುವ ಮಹಿಳಾ ತಂಡದವರು ಸರಕಾರದಿಂದ ಸಿಗುವ ಯೋಜನೆಗಳ ಕುರಿತು ಜನಪದ ಗೀತೆ ಹಾಗೂ ಬೀದಿ ನಾಟಕ ಪ್ರದರ್ಶನ ಮಾಡಿ ತೊರಿಸಿದ್ದಾರೆ ಇದರ ಉಪಯೋಗ ಪ್ರತಿಯೊಬ್ಬರು ಮಾಡಿಕೊಳ್ಳಬೇಕು ಎಂದರು.

ಗ್ರಾಪಂ ಅಧ್ಯಕ್ಷೆ ಸಿದ್ದಮ್ಮ ಬಳಗಾವಿ, ಸದಸ್ಯ ರಾಮನಗೌಡ ಪಾಟೀಲ, ಸಿದ್ದಪ್ಪ ಕತ್ಛರವಿ, ಸರಸ್ವತಿ ಕರೆಣ್ಣನವರ, ಮೆಹಬೂಬ್‌ಸಾಬ್‌ ಜೋಕನಾಳ, ಹನುಮಂತ ನಾಯ್ಕ ಲಮಾಣಿ, ಸಿಬ್ಬಂದಿಗಳಾದ ಕರಡಣ್ಣನವರ, ಬೆಳ್ಳಿ ಎಂ.ಎಸ್‌, ಮಂಜು ಮಾಳಮ್ಮನವರ, ಮಂಜು ಕವಲೆತ್ತನವರ, ಗ್ರಾಮಸ್ಥರಾದ ಕಣಜೇರ, ಸಿದ್ದಪ್ಪ ಗುಬ್ಬಿ, ರಮೇಶ ಗುಬ್ಬಿ, ಹಾಲನಗೌಡ, ರಿಜುವಾನ್‌ ಸಾಬ್‌ ಜಾಲಗಾರ, ಉಜ್ಜಪ್ಪ ಗುಬ್ಬಿ, ಸಿದ್ದಲಿಂಗಪ್ಪ ಗುಬ್ಬಿ, ಗುಡ್ಡಪ್ಪ ಕಾಡೇರ, ಈರನಗೌಡರ ಗುಬ್ಬಿ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next