Advertisement

ಸ್ವಾತಂತ್ರ ಸಂಗ್ರಾಮ: ಭಾರತಾಂಬೆಯ ಮಡಿಲಿಗೆ ದೊರೆತ ಸ್ವಾತಂತ್ರ

01:27 AM Aug 19, 2020 | Hari Prasad |

ವಂದೇ ಮಾತರಂ ವಂದೇ ಮಾತರಂ

Advertisement

ಇಲ್ಲೆಲ್ಲೂ ಅರಳಿದೆ ವಂದೇಮಾತರಂ

ಜಪಿಸುತ್ತಿರುವರು

ವಂದೇ ಮಾತರಂ ಜಯಗಾನ

ಭಾರತಾಂಬೆ ಮಕ್ಕಳು

Advertisement

ಬಿಡುಗಡೆಗಾಗಿ  ಹಂಬಲಿಸಿದರು

ಸ್ವಾತಂತ್ರ ಭಾರತಕ್ಕಾಗಿ ಎಲ್ಲೆಲ್ಲೂ

ಕ್ರಾಂತಿ ಕಹಳೆ ಮುಳುಗಿತ್ತು

ಸ್ವಾತಂತ್ರ ಸಂಗ್ರಾಮ ಚಳುವಳಿಗೆ

ಧುಮುಕಿದರು ಸಹಸ್ರಾರು ದೇಶಪ್ರೇಮಿಗಳು

ಕೆಚ್ಚೆದೆಯ ಸಂಗ್ರಾಮ ನಮ್ಮದು

ಭಾರತದ ಅಳಿವು ಉಳಿವಿಗಾಗಿ

ಒಗ್ಗೂಡಿ ಹೋರಾಡಿದರು

ಎಲ್ಲೆಲ್ಲೂ ಜನಸಾಗರ

ಕೆಚ್ಚೆದೆಯ ಸ್ವಾತಂತ್ರ

ಹೋರಾಟಗಾರರು ಸದಾ ನಿತ್ಯ

ನಮ್ಮದೊಂದೆ ಮಂತ್ರ

ಜಯದ ಮಂತ್ರ

ಸ್ವಾತಂತ್ರ ಹೋರಾಟಗಾರರು

ಭಾರತಾಂಬೆಯ ಮೇರುಗು ಬೀರಿದರು

ಗಾಂಧೀಜಿಯವರ ಶಾಂತಿ ಸಹನೆಯ

ನಮ್ಮ ಭೂಷಣ

ಸುಭಾಷ್ ಭಗತ್ ಪಂಡೆ ಆಜಾದ್ ಅವರ

ಕೆಚ್ಚೆದೆಯ ಧೈರ್ಯ ನಮ್ಮದು

ಮುಗಿಲು ಮುಟ್ಟಿದೆ

ಸ್ವರಾಜ್ಯ ಚಳುವಳಿಗಳು

ಕ್ರಾಂತಿ ಕಹಳೆ ಎಲ್ಲೆಲ್ಲೂ

ಸ್ವತಂತ್ರಕ್ಕಾಗಿ ಒಂದೆಡೆ

ಶಾಂತಿ ಸಹನೆ ಚಳುವಳಿಗಳು

ಸ್ವತಂತ್ರಕ್ಕಾಗಿ ಮತ್ತೊಂದೆಡೆ

ಕ್ರಾಂತಿ ದಂಗೆ ಚಳುವಳಿಗಳು

ಸ್ವತಂತ್ರಕ್ಕಾಗಿ ಹಲವು ಮಾರ್ಗಗಳು

ಒಂದೇ ಗುರಿಯವರದು

ಸ್ವಾತಂತ್ರವಾಯಿತು ನಮ್ಮ ಭಾರತ

ಭಾರತಾಂಬೆಯ ಮಡಿಲಿಗೆ ದೊರೆತ ಸ್ವಾತಂತ್ರ

– ಜೈಕುಮಾರ ವಿ.ಕುಂಬಾರದೊಡ್ಡ.

Advertisement

Udayavani is now on Telegram. Click here to join our channel and stay updated with the latest news.

Next