Advertisement

ಮೂಡಬಿದಿರೆ, ಬಜಪೆ, ಬೆಳ್ತಂಗಡಿ ಸರಣಿ ದರೋಡೆ ಪ್ರಕರಣ: 9 ಮಂದಿ ಆರೋಪಿಗಳು ಪೊಲೀಸರ ಬಲೆಗೆ

01:53 PM Apr 03, 2021 | Team Udayavani |

ಮಂಗಳೂರು: ಇತ್ತೀಚಿನ ದಿನಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ, ಬಜಪೆ, ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ನಡೆದ ಸರಣಿ ದರೋಡೆ ಪ್ರಕರಣಗಳಿಗೆ ಸಂಬಂಧಿಸಿದಂತೆ 9 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.

Advertisement

ಅಬ್ದುಲ್ ರವೂಫ್ (24 ವ), ರಾಮಮೂರ್ತಿ (23 ವ) ಅಶ್ರಫ್ ಪೆರಾಡಿ (27 ವ), ಸಂತೋಷ್ (24 ವ) ನವೀದ್ ( 36 ವ), ರಮಾನಂದ (48 ವ), ಸುಮನ್ (24 ವ), ಸಿದ್ದಿಕ್ (27 ವ) ಮತ್ತು ಅಲಿಕೋಯ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ.

ಇದನ್ನೂ ಓದಿ:10ನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ : ನೊಂದ ಬಾಲಕಿ ಆತ್ಮಹತ್ಯೆ!

ಮಾರ್ಚ್ 27ರಿಂದ 31ರವರೆಗೆ ಮೂಡಬಿದಿರೆಯಲ್ಲಿ ನಾಲ್ಕು, ಮೂಲ್ಕಿಯಲ್ಲಿ ಒಂದು ಮತ್ತು ಬಜಪೆಯಲ್ಲಿ ಎರಡು ಪ್ರಕರಣಗಳು ನಡೆದಿದ್ದವು. ಈ ಹಿಂದೆ ದಕ್ಷಿಣ ಕನ್ನಡ, ಉಡುಪಿ, ಹಾಸನ, ಬೆಂಗಳೂರು ಜಿಲ್ಲೆಗಳಲ್ಲೂ ನಡೆದ ದರೋಡೆ ಪ್ರಕರಣಗಳಲ್ಲಿ ಈ ಆರೋಪಿಗಳು ಭಾಗಿಯಾಗಿರುವುದು ಬೆಳಕಿಗೆ ಬಂದಿದೆ.

Advertisement

ಇದನ್ನೂ ಓದಿ: ‘ಕಬ್ಜ’ ಶೂಟಿಂಗ್ ವೇಳೆ ಅವಘಡ : ಉಪ್ಪಿ ತಲೆಗೆ ರಾಡ್‍ ಏಟು  

ಆರೋಪಿಗಳಿಂದ ಎರಡು ತಲವಾರು, ಒಂದು ಏರ್ ಗನ್, ಒಂದು ಕಬ್ಬಿಣದ ರಾಡು, ಒಂದು ಕಬ್ಬಿಣದ ಲಿವರ್, ಒಂದು ಉದ್ದನೆಯ ಚಾಕು, ಒಂದು ಪಾಕೆಟ್ ಖಾರದ ಪುಡಿ, ಮರದ ದೊಣ್ಣೆಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next