Advertisement

Bantwal ರಸ್ತೆ ದಾಟಲು ನಿಂತಿದ್ದ ಮಹಿಳೆಗೆ ರಿಕ್ಷಾ ಢಿಕ್ಕಿ; ಗಾಯ

01:38 AM Jul 27, 2024 | Team Udayavani |

ಬಂಟ್ವಾಳ: ಫರಂಗಿ ಪೇಟೆಯಲ್ಲಿ ರಸ್ತೆ ದಾಟಲು ನಿಂತಿದ್ದ ಮಹಿಳೆಗೆ ಆಟೋ ರಿಕ್ಷಾವೊಂದು ಢಿಕ್ಕಿ ಹೊಡೆದು ಕೇರಳ ಕಣ್ಣೂರು ಮೂಲದ ಮಹಿಳೆ ಗಂಭೀರ ಗಾಯಗೊಂಡ ಘಟನೆ ಜು. 24ರಂದು ನಡೆದಿದೆ.

Advertisement

ಮೂಲತಃ ಕೇರಳ ಕಣ್ಣೂರಿನ ಮುಂಡಯ ಪರಂಬೂರು ನಿವಾಸಿ ಪ್ರಸ್ತುತ ಪಡೀಲ್‌ ರೈಲು ನಿಲ್ದಾಣ ಬಳಿಯ ವಿಜಯನಗರದಲ್ಲಿ ನೆಲೆಸಿ ರುವ ವಿಸ್ಮಯ ಸಿ.ಎಂ. ಘಟನೆ ಯಲ್ಲಿ ಗಂಭೀರ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ದಾಖಲಿಸ ಲ್ಪಟ್ಟಿದ್ದಾರೆ.

ಅವರು ರಸ್ತೆ ದಾಟಲು ನಿಂತಿದ್ದ ವೇಳೆ ಮಂಗಳೂರು ಕಡೆಗೆ ತೆರಳುವ ಆಟೋ ರಿಕ್ಷಾವನ್ನು ಚಾಲಕ ಯಾಸಿರ್‌ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾ ಯಿಸಿಕೊಂಡು ಬಂದು ಢಿಕ್ಕಿ ಹೊಡೆದಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಬಂಟ್ವಾಳ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next