Advertisement

Aranthodu ಸೇತುವೆಯಿಂದ ಕೆಳಕ್ಕೆ ಬಿದ್ದ ಆಟೋ ರಿಕ್ಷಾ; ತಪ್ಪಿದ ದೊಡ್ಡ ಅನಾಹುತ

12:16 AM Aug 26, 2024 | Team Udayavani |

ಅರಂತೋಡು: ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಕುಕ್ಕುಂಬಳ ಸೇತುವೆಯಿಂದ ಕೆಳಗಡೆ ಆಟೋ ರಿಕ್ಷಾವೊಂದು ಬಿದ್ದು, ಆಟೋ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Advertisement

ಆಟೋ ಚಾಲಕ ವೇಣುಗೋಪಾಲ ದೇವಮೂಲೆ ಪ್ರಾಣಾಪಯದಿಂದ ಪಾರಾದ ವ್ಯಕ್ತಿಯಾಗಿದ್ದಾರೆ. ಅವರು ದೇವಮೂಲೆಗೆ ಪ್ರಯಾಕರನ್ನು ಬಿಟ್ಟು ಪೆರಾಜೆ ಕಡೆ ಬರುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಆಟೋ ರಿಕ್ಷಾ ಜಖಂಗೊಂಡಿದ್ದು, ಮೇಲಕ್ಕೆ ಎತ್ತುವ ಪ್ರಯತ್ನ ನಡೆಯುತ್ತಿದೆ. ಹೊಳೆಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದ ಹಿನ್ನೆಲೆಯಲ್ಲಿ ದೊಡ್ಡ ಅನಾಹುತ ತಪ್ಪಿದೆ.

Advertisement

Udayavani is now on Telegram. Click here to join our channel and stay updated with the latest news.

Next