Advertisement

ಕಂಬಳ ಬೈಲ್‌: ಗದ್ದೆಯಲ್ಲಿ ಮತ್ತೆ ಮತ್ತೆ ಆಕಸ್ಮಿಕ ಬೆಂಕಿ: ಸ್ಥಳೀಯರಲ್ಲಿ ಆತಂಕ  

11:16 AM Mar 16, 2022 | Team Udayavani |

ಕಾಪು: ಕಳತ್ತೂರು ಗ್ರಾಮದ ಪೈಯ್ಯಾರು ಕಂಬಳ ಬೈಲ್‌ನಲ್ಲಿ ಕಳೆದ ಎರಡು ದಿನಗಳಿಂದ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ.

Advertisement

ಸೋಮವಾರ ಮಧ್ಯಾಹ್ನ ಗದ್ದೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಯಿತು. ಸ್ಥಳೀಯರು ಬೆಂಕಿ ನಂದಿಸಲು ಪ್ರಯತ್ನಿಸಿದ್ದು, ವಿಫಲರಾದ ಪರಿಣಾಮ ಸ್ಥಳೀಯರ ಮನವಿಯ ಮೇರೆಗೆ ಐಎಸ್‌ಪಿಆರ್‌ಎಲ್‌ನ ಅಗ್ನಿಶಾಮಕದಳದ ವಾಹನವು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಪ್ರಯತ್ನ ನಡೆಸಿದೆ.

ಸೋಮವಾರ ರಾತ್ರಿ ಮತ್ತೆ ಬೆಂಕಿ ಕಾಣಿಸಿಕೊಂಡಿದ್ದು, ಉಡುಪಿ ಜಿಲ್ಲಾ ಅಗ್ನಿಶಾಮಕದಳದ ಸಿಬಂದಿಗಳು ಬೆಂಕಿಯನ್ನು ನಂದಿಸಿದ್ದರು. ಮಂಗಳವಾರ ಬೆಳಗ್ಗೆ ಮತ್ತೆ ಅದೇ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಉಡುಪಿ ಜಿಲ್ಲಾ ಅಗ್ನಿಶಾಮಕದಳದ ಸಿಬಂದಿಗಳು ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸುವ ಪ್ರಯತ್ನ ಮಾಡಿದ್ದಾರೆ.

ಇದನ್ನೂ ಓದಿ:ಪರಿಸರ ಅಧಿಕಾರಿ ಮನೆ, ಕಚೇರಿ ಮೇಲೆ ಎಸಿಬಿ ದಾಳಿ: ಅಪಾರ ಪ್ರಮಾಣ ಆಸ್ತಿ ಪತ್ತೆ

Advertisement

ಪೈಯ್ಯಾರು ಕಂಬಳ ಬೈಲ್‌ನಲ್ಲಿ ಹಡೀಲು ಬಿದ್ದಿದ್ದ ಗದ್ದೆಯೊಂದಕ್ಕೆ ಗದ್ದೆಯ ಮಾಲಕರು ಬೆಂಕಿ ಹಚ್ಚಿದ್ದು, ಅದರ ಪರಿಣಾಮವಾಗಿ ಬೆಂಕಿ ಎಲ್ಲೆಡೆಗೆ ವ್ಯಾಪಿಸುವಂತಾಗಿದೆ. ಇದರಿಂದಾಗಿ ಸುತ್ತಲಿನ ಹಲವಾರು ಮರ ಮುಟ್ಟುಗಳಿಗೂ ಬೆಂಕಿ ಆವರಿಸಿದ್ದು, ಬೆಂಕಿಯ ಕೆನ್ನಾಲಿಗೆ ಸಂಜೆಯವರೆಗೂ ಕಂಡು ಬರುತ್ತಿತ್ತು. ಕಳೆದ ಮೂರು ವರ್ಷಗಳಿಂದಲೂ ಇದೇ ರೀತಿಯ ಘಟನೆ ಸಂಭವಿಸುತ್ತಿದ್ದು ಈ ಬಗ್ಗೆ ಸಂಬಂಧಪಟ್ಟವರು ಸೂಕ್ತ ರೀತಿಯ ಕ್ರಮ ತೆಗೆದುಕೊಳ್ಳುವಂತೆ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next