Advertisement

ನಿರುದ್ಯೋಗ ನಿವಾರಣೆಗೊಂದು ಉಪಾಯವಿದೆ: ಡಿಕೆಶಿ ಹೇಳಿದ್ದೇನು ?

04:05 PM Oct 24, 2021 | Team Udayavani |

ಬೆಂಗಳೂರು : ಪೆಟ್ರೋಲ್ ಬೆಲೆ ಏರಿಕೆ ಮತ್ತು ನಿರುದ್ಯೋಗ ಸಮಸ್ಯೆಯ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಭಾನುವಾರ ವ್ಯಂಗ್ಯವಾಗಿ ಟ್ವೀಟ್ ಮಾಡಿ ಬಿಜೆಪಿ ನಾಯಕರನ್ನು ಕುಟುಕಿದ್ದಾರೆ.

Advertisement

”ನಿರುದ್ಯೋಗ ನಿವಾರಣೆಗೊಂದು ಉಪಾಯವಿದೆ, ಪ್ರತಿದಿನ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆಯಾಗೋದನ್ನ ನೋಡ್ತಿದ್ದೀರಿ. ಹಾಗಾಗಿ, ಇವತ್ತು ಪೆಟ್ರೋಲ್‌ ಕೊಂಡು, ಸ್ವಲ್ಪ ದಿನಗಳ ನಂತರ ಮಾರಾಟ ಮಾಡಿದ್ರೆ ನಿಮಗೆ ಲಾಭವಾಗಬಹುದು. ಮುಂದೊಂದು ದಿನ ಪೆಟ್ರೋಲ್‌ ಬೆಲೆ 200 ರೂಪಾಯಿ ತಲುಪಿದ್ರೆ ನಿಮ್ಮ ಜೇಬಲ್ಲಿ ಎಷ್ಟು ಹಣ ಇರಬಹುದು ನೀವೇ ಊಹಿಸಿ.”ಎಂದು ಬರೆದಿದ್ದಾರೆ.

ಇನ್ನೊಂದು ಟ್ವೀಟ್ ನಲ್ಲಿ, ”ಮಹಿಳೆಯರು ಸಂಜೆ 5ರ ನಂತರ ಪೊಲೀಸ್‌ ಠಾಣೆಗೆ ಹೋಗಬಾರದು ಎಂದು ಉತ್ತರ ಪ್ರದೇಶದ ಬಿಜೆಪಿ ಮಹಿಳಾ ನಾಯಕಿಯೊಬ್ರು ಪುಕ್ಕಟೆ ಸಲಹೆ ನೀಡಿದ್ದಾರೆ. ಯುಪಿಯಲ್ಲಿ ಮಹಿಳಾ ಸುರಕ್ಷತೆಗೆ ಕಂಟಕ ಇದೆ ಎಂಬುದನ್ನು ಅವರೇ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ಇದು ಯುಪಿ ಮಾದರಿ, ಇಂಥ ಜಂಗಲ್‌ ರಾಜ್‌ ವ್ಯವಸ್ಥೆಯನ್ನು ಕರ್ನಾಟಕದಲ್ಲೂ ಜಾರಿಗೆ ತರಲು ಹೊರಟಿದ್ದಾರಾ?” ಎಂದು ಪ್ರಶ್ನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next