Advertisement

ಕಾರಾಗೃಹದಲ್ಲಿದ್ದ ಕೈದಿ ನಾಪತ್ತೆ

07:50 AM Aug 16, 2018 | Team Udayavani |

ಬಳ್ಳಾರಿ: ಜೀವಾವಧಿ ಶಿಕ್ಷೆಗೆ ಒಳಗಾಗಿ ನಗರದ ಕೇಂದ್ರ ಕಾರಾಗೃಹದಲ್ಲಿದ್ದ ಕೈದಿಯೊಬ್ಬ ರಕ್ತ ಪರೀಕ್ಷೆಗೆಂದು ಇಲ್ಲಿನ ವಿಮ್ಸ್‌ ಆಸ್ಪತ್ರೆಗೆ ಕರೆದೊಯ್ದ ವೇಳೆ ಭದ್ರತಾ ಸಿಬ್ಬಂದಿ ಕಣ್ತಪ್ಪಿಸಿ ಮಂಗಳವಾರ ರಾತ್ರಿ ಪರಾರಿಯಾಗಿದ್ದಾನೆ.

Advertisement

ಮೈಸೂರು ಜಿಲ್ಲೆ ಮೂಲದ ಸಂಜಯ ಅಲಿಯಾಸ್‌ ಕೃಷ್ಣನಾಯ್ಕ (32) ಪರಾರಿಯಾದ ಕೈದಿ. ಕೊಲೆ ಪ್ರಕರಣವೊಂದರಲ್ಲಿ 2004ರಲ್ಲಿ ಈತ ಬಂ ಧಿತನಾಗಿದ್ದ. ಜೀವಾವ ಧಿ ಶಿಕ್ಷೆ ವಿ ಧಿಸಿದ ಬಳಿಕ ಬೆಂಗಳೂರು ಜೈಲಿನಲ್ಲಿದ್ದ ಈತನನ್ನು 2016ರಲ್ಲಿ ಬಳ್ಳಾರಿ ಜೈಲಿಗೆ ವರ್ಗಾಯಿಸಲಾಗಿತ್ತು.

ಹಲವು ತಿಂಗಳಿಂದ  ಅನಾರೋಗ್ಯದಿಂದ ಬಳಲುತ್ತಿದ್ದ ಈತನನ್ನು ಮಂಗಳವಾರ ಸಂಜೆ 4.15ರ ಸುಮಾರಿಗೆ ಇಬ್ಬರು ಭದ್ರತಾ ಸಿಬ್ಬಂದಿಯೊಂದಿಗೆ ವಿಮ್ಸ್‌ ಆಸ್ಪತ್ರೆಗೆ ಕಳುಹಿಸಿಕೊಡಲಾಗಿತ್ತು. ಅಲ್ಲಿ ವೈದ್ಯರ ಸಲಹೆ ಮೇರೆಗೆ ರಕ್ತ ಪರೀಕ್ಷೆ ಮಾಡಿಸಲಾಗಿದೆ. ನಂತರ ಕೈದಿಯನ್ನು  ಕೊಠಡಿಯೊಂದರಲ್ಲಿ ಕೂಡಿಸಿ ಒಬ್ಬರು ರಕ್ತಪರೀಕ್ಷೆ ವರದಿ ಪಡೆಯಲು, ಮತ್ತೂಬ್ಬ ಸಿಬ್ಬಂದಿ ವೈದ್ಯಕೀಯ ವರದಿ ಪಡೆಯಲು ತೆರಳಿದ್ದಾರೆ. ವಾಪಸ್‌ ಬಂದು ನೋಡಿದಾಗ, ಸ್ಥಳದಲ್ಲಿ ಕೈದಿ ಇರಲಿಲ್ಲ. ತಕ್ಷಣ ಕಾರಾಗೃಹದ ಅ ಧೀಕ್ಷಕ ಡಾ| ಪಿ.ರಂಗನಾಥ್‌ ಅವರಿಗೆ ಮಾಹಿತಿ ನೀಡಿದ್ದಾರೆ. ಕೌಲ್‌ ಬಜಾರ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next