Advertisement

Suicide: ಪ್ರಿಂಟಿಂಗ್‌ ಪ್ರಸ್‌ ಮಾಲಕ ಬಾವಿಗೆ ಹಾರಿ ಆತ್ಮಹತ್ಯೆ

12:24 AM Aug 18, 2023 | Team Udayavani |

ಪುತ್ತೂರು: ಅಡ್ಯನಡ್ಕದ ಪ್ರಿಂಟಿಂಗ್‌ ಪ್ರಸ್‌ ಮಾಲಕ, ಪೋಳ್ಯ ನಿವಾಸಿ ಪದ್ಮಯ್ಯ ಗೌಡ (50) ಮನೆ ಸಮೀಪದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಭವಿಸಿದೆ.

Advertisement

ಆ. 13ರಂದು ಅಡ್ಯನಡ್ಕದಿಂದ ಪೋಳ್ಯ ಮನೆಗೆ ಹೋಗುವುದಾಗಿ ಪತ್ನಿಗೆ ಕರೆ ಮಾಡಿ ತಿಳಿಸಿದ್ದರು. ಅದರಂತೆ ವಿನೋದಾ ಅವರು ಭಾವ ಕೃಷ್ಣಪ್ಪ ಗೌಡರಿಗೆ ಕರೆ ಮಾಡಿ ನನ್ನ ಗಂಡ ಸೋಮವಾರ ಪೋಳ್ಯ ಮನೆಗೆ ಬರುತ್ತಾರಂತೆ ಎಂದು ತಿಳಿಸಿದ್ದರು. ಆದರೆ ಸೋಮವಾರ ಪದ್ಮಯ್ಯ ಗೌಡ ಮನೆಗೆ ಬಾರದೇ ಇದ್ದುದರಿಂದ ಕೃಷ್ಣಪ್ಪ ಗೌಡರು ವಿನೋದಾ ಅವರಿಗೆ ಕರೆ ಮಾಡಿ ವಿಚಾರಿಸಿದ್ದರು.

ಈ ನಡುವೆ ಪದ್ಮಯ್ಯ ಗೌಡ ಅವರ ಫೋನ್‌ಗೆ ಕರೆ ಮಾಡಿದಾಗ ಕರೆ ಸ್ವೀಕರಿಸದೇ ಇದ್ದುದು ಅನುಮಾನಕ್ಕೆ ಕಾರಣವಾಯಿತು. ಹುಡುಕಾಟ ನಡೆಸಿದಾಗ ಪೋಳ್ಯ ಮನೆಯ ರಸ್ತೆ ಬದಿ ಪದ್ಮಯ್ಯ ಗೌಡರ ಸ್ಕೂಟರ್‌ ಇರುವುದು ಕಂಡು ಬಂತು. ಸಂಶಯ ಬಲಗೊಂಡು ಅವರ ಫೋನ್‌ಗೆ ಕರೆ ಮಾಡಿದಾಗ ಫೋನ್‌ ರಿಂಗಣಿಸಿತು. ಇದರ ಜಾಡು ಹಿಡಿದು ಹೋದಾಗ ಮನೆ ಸಮೀಪ ಬೇರೊಬ್ಬರ ತೋಟದ ಬಾವಿಯ ಕಟ್ಟೆಯಲ್ಲಿ ಪದ್ಮಯ್ಯ ಗೌಡರ ಬಟ್ಟೆ ಬರೆಗಳಿರುವುದು ಕಂಡು ಬಂತು. ಅದೇ ಬಾವಿಯಲ್ಲಿ ಹುಡುಕಾಡಿದಾಗ ಪದ್ಮಯ್ಯ ಗೌಡರ ಮೃತದೇಹ ಪತ್ತೆಯಾಗಿತ್ತು. ಪತ್ನಿ ನೀಡಿದ ದೂರಿನಂತೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next