Advertisement

Missing Case ಕುಕ್ಕೆಗೆ ಬಂದಿದ್ದ ಪೊನ್ನಂಪೇಟೆ ವ್ಯಕ್ತಿ ನಾಪತ್ತೆ

11:47 PM Jul 23, 2024 | Team Udayavani |

ಸುಬ್ರಹ್ಮಣ್ಯ: ತಿಂಗಳ ಹಿಂದೆ ಕುಕ್ಕೆಗೆ ಬಂದಿದ್ದ ಕೊಡಗು ಮೂಲದ ಕುಟುಂಬದಲ್ಲಿನ ಸದಸ್ಯನೋರ್ವ ನಾಪತ್ತೆಯಾಗಿರುವ ಬಗ್ಗೆ ಸುಬ್ರಹ್ಮಣ್ಯ ಠಾಣೆಗೆ ದೂರು ನೀಡಲಾಗಿದೆ.

Advertisement

ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾ| ಮಾಯಮುಡಿ ಚೆನ್ನಂಗುಳಿ ಗ್ರಾಮದ ರಘು (49) ನಾಪತ್ತೆಯಾಗಿ ರುವವರು. ಕೊಡಗಿನ ಸುಮಾರು 30 ಜನರ ತಂಡ ಜೂ. 24ರಂದು ಕುಕ್ಕೆಗೆ ಬಂದಿದ್ದು, ಎರಡು ದಿನಗಳ ಕಾಲ ಪೂಜೆ ನೆರವೇರಿಸಿ ಜೂ. 26ರಂದು ಕುಕ್ಕೆಯಿಂದ ತೆರಳುವ ವೇಳೆ ರಘು ನಾಪತ್ತೆಯಾಗಿದ್ದಾರೆ. ಪೇಟೆಯಲ್ಲಿ, ಸುಬ್ರಹ್ಮಣ್ಯ ಸ್ಥಳೀಯ ಪರಿಸರದಲ್ಲಿ ಹುಡುಕಾಡಿದರೂ ರಘು ಅವರು ಪತ್ತೆಯಾಗಿರುವುದಿಲ್ಲ.

ಈ ಬಗ್ಗೆ ಕುಟುಂಬದವರು ಸುಬ್ರಹ್ಮಣ್ಯ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಅವರು ಪತ್ತೆಯಾಗದೇ ಇರುವುದರಿಂದ ಕುಟುಂಬದವರು ಮತ್ತೆ ಸುಬ್ರಹ್ಮಣ್ಯದ ಸ್ಥಳೀಯರನ್ನು ಸಂಪರ್ಕಿಸಿ ವಿವಿಧೆಡೆಗಳಲ್ಲಿ ಹುಡುಕುವ ಪ್ರಯತ್ನ ನಡೆಸುತ್ತಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next