Advertisement

ಬಜಪೆ: ವಿಳಾಸ ಬದಲಿಸಿ ತಲೆಮರೆಸಿಕೊಂಡಿದ್ದ ವ್ಯಕ್ತಿ ಬಂಧನ

07:40 PM Sep 08, 2022 | Team Udayavani |

ಬಜಪೆ: ನಕಲಿ ಪಾಸ್‌ ಪೋರ್ಟ್‌ ಬಳಸಿ 2008ರ ಅ. 5ರಂದು ದುಬಾೖಗೆ ತೆರಳಲು ಯತ್ನಿಸಿದ್ದ ವ್ಯಕ್ತಿಯನ್ನು ಇಮಿಗ್ರೇಷನ್‌ ಅಧಿಕಾರಿಗಳು ಪತ್ತೆ ಹಚ್ಚಿದ್ದು, ಅವರ ದೂರಿನಂತೆ ಬಜಪೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾದ ವ್ಯಕ್ತಿ ಕಾಸರಗೋಡಿನ ಮಮ್ಮುಂಞ ಯಾನೆ ಮುಹಮ್ಮದ್‌ ಕುಂಞ (53) ಹತ್ತು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಆತನನ್ನು ಬಜಪೆ ಪೊಲೀಸರು ಬಂಧಿಸಿದ್ದಾರೆ.

Advertisement

ಆತ ಕೇರಳದಲ್ಲಿ ವಿಳಾಸವನ್ನು ಬದಲಿಸುತ್ತಾ ತಪ್ಪಿಸಿಕೊಂಡಿದ್ದ. ಕೇರಳ ರಾಜ್ಯದ ಹೊಸದುರ್ಗಾ ಜಿಲ್ಲೆಯ ಹರಿಪುರಂ ಪುಲ್ಲೂರಿನ ಆತನ ಇರುವಿಕೆಯನ್ನು ಪತ್ತೆ ಹಚ್ಚಿದ್ದ ಬಜಪೆ ಪೊಲೀಸರು ತನನ್ನು ಬಂಧಿಸಿದ್ದಾರೆ.

ಮಂಗಳೂರು ನಗರ ಪೊಲೀಸ್‌ ಆಯುಕ್ತ ಎನ್‌. ಶಶಿಕುಮಾರ್‌ ಅವರ ಮಾರ್ಗದರ್ಶನದಂತೆ ಡಿಸಿಪಿ ಅಂಶು ಕುಮಾರ್‌ ಮತ್ತು ದಿನೇಶ್‌ ಕುಮಾರ್‌ ಹಾಗೂ ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಎನ್‌. ಮಹೇಶ್‌ಕುಮಾರ್‌ ಅವರ ನಿರ್ದೇಶನದಂತೆ ನಡೆದ ಈ ಕಾರ್ಯಾಚರಣೆಯಲ್ಲಿ ಬಜಪೆ ಪೊಲೀಸ್‌ ನಿರೀಕ್ಷಕ ಪ್ರಕಾಶ್‌, ಪಿಎಸ್‌ಐ ಪೂವಪ್ಪ, ಗುರುಕಾಂತಿ, ಎಎಸ್‌ಐ ರಾಮಣ್ಣ ಪೂಜಾರಿ, ಸಿಬಂದಿ ರೋಹಿತ್‌ ಪಾವಂಜೆ, ಸಂತೋಷ್‌ ಡಿ.ಕೆ., ಸಂಜೀವ ಭಜಂತ್ರಿ, ರಶೀದ್‌ಶೇಕ್‌, ಅಭಿಷೇಕ್‌, ಮೋಹನ್‌ ಅವರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next