Advertisement

ನಿರ್ದೇಶಕರ ಸಂಘದ ನೂತನ ಕಚೇರಿ ಉದ್ಘಾಟನೆ 

06:04 AM Jan 07, 2019 | |

ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ನೂತನ ಕಚೇರಿ ಉದ್ಘಾಟನೆಯಾಗಿದೆ. ಬೆಂಗಳೂರಿನ ನಾಗರಭಾವಿಯ 2ನೇ ಹಂತದಲ್ಲಿರುವ ನೂತನ ಕಚೇರಿಯನ್ನು ಭಾನುವಾರ ನಿರ್ದೇಶಕ, ನಟ ಉಪೇಂದ್ರ ಉದ್ಘಾಟಿಸಿದರು.

Advertisement

ಇದೇ ಸಂದರ್ಭದಲ್ಲಿ ಹಿರಿಯ ನಿರ್ದೇಶಕ ರೇಣುಕಾ ಶರ್ಮ ಸಂಘದ ನೂತನ ವೆಬ್‌ಸೈಟ್‌ಗೆ ಮತ್ತು ನಟ ರಮೇಶ್‌ ಅರವಿಂದ್‌ ಕಾನ್ಫಿಡಾ ತರಬೇತಿ ಶಾಲೆಗೆ ಚಾಲನೆ ನೀಡಿದರು. ಹಿರಿಯ ನಿರ್ದೇಶಕ ಭಗವಾನ್‌ ಮತ್ತು ನಟ ಸುದೀಪ್‌ ಹೊಸವರ್ಷದ ಡೈರಿ ಮತ್ತು ಕ್ಯಾಲೆಂಡರ್‌ಗಳನ್ನು ಅನಾವರಣಗೊಳಿಸಿದರು.

ಕಾರ್ಯಕ್ರಮದಲ್ಲಿ ನಿರ್ದೇಶಕರ ಸಂಘದ ಅಧ್ಯಕ್ಷ ನಾಗೇಂದ್ರ ಪ್ರಸಾದ್‌, ಉಪಾಧ್ಯಕ್ಷ ಸಾಧುಕೋಕಿಲಾ, ಹಿರಿಯ ನಿರ್ದೇಶಕ ಗಿರೀಶ್‌ ಕಾಸರವಳ್ಳಿ, ರಾಜೇಂದ್ರ ಸಿಂಗ್‌ ಬಾಬು, ನಿರ್ದೇಶಕಿಯರಾದ ವಿಜಯಲಕ್ಷ್ಮೀ ಸಿಂಗ್‌, ರೂಪಾ ಅಯ್ಯರ್‌ ಸೇರಿದಂತೆ ನಿರ್ದೇಶಕರ ಸಂಘದ ಪದಾಧಿಕಾರಿಗಳು, ಸದಸ್ಯರು ಭಾಗಿಯಾಗಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next