Advertisement

ಸರಕಾರಕ್ಕೆ ಸಡ್ಡು ಹೊಡೆಯುವ ಕಾಲ ಇದಲ್ಲ:  ಸ್ವಾಮಿ

11:06 PM Sep 08, 2021 | Team Udayavani |

ಚಿತ್ರದುರ್ಗ: ಗಣೇಶೋತ್ಸವದ ವಿಚಾರದಲ್ಲಿ ಸರಕಾರದ ನಿಯಮಗಳನ್ನು ಪಾಲಿಸುವುದರ ಜತೆಗೆ ನಮ್ಮ ಧರ್ಮ ರಕ್ಷಣೆಯನ್ನೂ ಮಾಡೋಣ. ಸರಕಾರಕ್ಕೆ ಸಡ್ಡು ಹೊಡೆದು ಯಾವುದೇ ತೀರ್ಮಾನಗಳನ್ನೂ ತೆಗೆದುಕೊಳ್ಳುವ ಕಾಲ ಇದಲ್ಲ ಎಂದು ಕೇಂದ್ರ ಸಚಿವ  ನಾರಾಯಣ ಸ್ವಾಮಿ ಹೇಳಿದರು.

Advertisement

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಯಾವುದೇ ವ್ಯಕ್ತಿ ಅಥವಾ ಧಾರ್ಮಿಕ ವಿಚಾರವಲ್ಲ. ನಾವು ಕೂಡ ಸಮಾಜ ಹಾಗೂ ದೇಶ ಕಟ್ಟುವ ಕಾರ್ಯದಲ್ಲಿ ಭಾಗಿಯಾಗಿದ್ದೇವೆ. ಇದೆಲ್ಲದರ ನಡುವೆ ಕೋವಿಡ್‌ ನಿಯಂತ್ರಣ ಮಾಡುವ ಜವಾಬ್ದಾರಿಯೂ ಇದೆ.  ದೇಶ ಹಾಗೂ ರಾಜ್ಯಕ್ಕೆ ಮತ್ತೆ ಕೋವಿಡ್‌ ಹರಡುವಂತೆ ಮಾಡಬಾರದು. ಸರಕಾರದ್ದು ಸರಿ, ಸಂಘಟನೆಗಳದ್ದು ತಪ್ಪು ಎಂದು ವಾದ ಮಾಡಲು ಈಗ ಸೂಕ್ತ ಸಮಯವಲ್ಲ. ನಾನು ಜನಾಶೀರ್ವಾದ ಯಾತ್ರೆ ಮಾಡುವಾಗಲೇ ನನ್ನಿಂದ ತಪ್ಪಾಗಿದೆ ಎಂದು ಹೇಳಿದ್ದೇನೆ, ಮುಂದೆಯೂ ಹೇಳುತ್ತೇನೆ. ಪರಿಸ್ಥಿತಿಯ ಕಾರಣಕ್ಕೆ ಕಾರ್ಯಕ್ರಮ ನಡೆಯಿತು. ಆದರೆ ಎಲ್ಲಿಯೂ ಕೋವಿಡ್‌ ಹರಡಲಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next