Advertisement

ಹತಾಶೆಗೊಂಡ ರಾಜವಂಶ; ರಾಹುಲ್ ಟ್ವೀಟ್ ಗೆ ಸ್ಮೃತಿ ಇರಾನಿ ತಿರುಗೇಟು

03:58 PM Jul 15, 2023 | Team Udayavani |

ಹೊಸದಿಲ್ಲಿ : “ಭಾರತದ ಆಂತರಿಕ ವಿಷಯಗಳಲ್ಲಿ ಅಂತಾರಾಷ್ಟ್ರೀಯ ಹಸ್ತಕ್ಷೇಪವನ್ನು ಬಯಸುವ ವ್ಯಕ್ತಿ, ‘ಮೇಕ್ ಇನ್ ಇಂಡಿಯಾ’ ಮಹತ್ವಾಕಾಂಕ್ಷೆಯನ್ನು ಸುಳ್ಳಾಗಿಸುವ ಹತಾಶೆಗೊಂಡ ಕುಟುಂಬ ರಾಜಕಾರಣಿಗಳ ವಂಶವು ನಮ್ಮ ಪ್ರಧಾನಿ ರಾಷ್ಟ್ರೀಯ ಗೌರವವನ್ನು ಪಡೆದಾಗ ಭಾರತವನ್ನು ಅಣಕಿಸುತ್ತದೆ.” ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಟ್ವೀಟ್ ಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ತಿರುಗೇಟು ನೀಡಿದ್ದಾರೆ.

Advertisement

”ಜನರಿಂದ ತಿರಸ್ಕರಿಸಲ್ಪಟ್ಟ ಅವರು, ರಕ್ಷಣಾ ಒಪ್ಪಂದಗಳು ಕುಟುಂಬ ರಾಜಕಾರಣಿಗಳ ಹೊಸ್ತಿಲಲ್ಲಿ ಇಳಿಯುವುದಿಲ್ಲ.”ಎಂದು ಸಚಿವೆ ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ.

ರಾಹುಲ್ ಗಾಂಧಿ ಅವರು, ”ಮಣಿಪುರ ಸುಡುತ್ತಿದೆ. ಯುರೋಪಿಯನ್ ಯೂನಿಯನ್ ಸಂಸತ್ತು ಭಾರತದ ಆಂತರಿಕ ವಿಷಯವನ್ನು ಚರ್ಚಿಸುತ್ತದೆ. ಪ್ರಧಾನಿ ಒಂದನ್ನೂ ಹೇಳಿಲ್ಲ!, ಏತನ್ಮಧ್ಯೆ, ರಫೇಲ್ ಅವರಿಗೆ ಬಾಸ್ಟಿಲ್ ಡೇ ಪರೇಡ್‌ಗೆ ಟಿಕೆಟ್ ಸಿಗುತ್ತದೆ.” ಎಂದು ಟ್ವೀಟ್ ಮಾಡಿದ್ದರು.

ಸಚಿವೆ ಸ್ಮೃತಿ ಇರಾನಿ ಅವರಿಗೆ ಈ ವಿಷಯದ ಬಗ್ಗೆ ಮಾತನಾಡುವಂತೆ ಹೇಳಿ, ಪ್ರಧಾನಿ ಜಗತ್ತನ್ನು ಸುತ್ತುತ್ತಿದ್ದಾರೆ ಆದರೆ ಮಣಿಪುರ ವಿಷಯದ ಬಗ್ಗೆ ಒಂದು ನಿಮಿಷವೂ ಮಾತನಾಡುವುದಿಲ್ಲ ಎಂದು ಕಾಂಗ್ರೆಸ್ ಮುಖಂಡ ಕೆಸಿ ವೇಣುಗೋಪಾಲ್ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next