Advertisement

Uppala: ಮಹಡಿಯಿಂದ ಬಿದ್ದ ವ್ಯಕ್ತಿ ಸಾವು

11:31 PM Feb 03, 2024 | Team Udayavani |

ಉಪ್ಪಳ: ಮನೆಯ ಮಹಡಿಯಿಂದ ಆಯತಪ್ಪಿ ಬಿದ್ದು ಗಂಭೀರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆಟೋ ರಿಕ್ಷಾ ಚಾಲಕ, ಕುಬಣೂರು ನಿವಾಸಿ ಪದ್ಮನಾಭ (50) ಅವರು ಸಾವಿಗೀಡಾದರು. ಕಳೆದ ಗುರುವಾರ ಸಂಜೆ ಕುಬಣೂರು ಪರಿಸರದ ನಿರ್ಮಾಣ ಹಂತದಲ್ಲಿರುವ ಮನೆಗೆ ಗ್ರಿಲ್ಸ್‌ ನಿರ್ಮಾಣಕ್ಕೆ ಕಾರ್ಮಿಕರನ್ನು ಕರೆದೊಯ್ದು, ಮೇಲಂತಸ್ತಿನಲ್ಲಿ ಕಾರ್ಮಿಕರ ಜತೆ ಅಳತೆ ತೆಗೆಯಲು ಸಹಕರಿಸುತ್ತಿದ್ದಾಗ ಆಯ ತಪ್ಪಿ ಮೆಟ್ಟಿಲಿನಿಂದ ಬಿದ್ದು ತಲೆಗೆ ಗಂಭೀರ ಗಾಯಗೊಂಡಿದ್ದರು.

Advertisement

ಮೃತರು ಬಿಎಂಎಸ್‌ ಮಂಗಲ್ಪಾಡಿ ಪಂಚಾಯತ್‌ ಸಮಿತಿ ಜತೆ ಕಾರ್ಯದರ್ಶಿಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next