Advertisement
ಅವರು ಮೂಡುಬಿದಿರೆಯ ಎಕ್ಸಲೆಂಟ್ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಎನ್ಸಿಸಿ ಘಟಕದ ವತಿಯಿಂದ ನಡೆದ ಎನ್ಸಿಸಿ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಯಾವುದೇ ಸಮಸ್ಯೆ ಬಾರದಂತೆ ತಡೆಗಟ್ಟಲು ಅನೇಕ ಪೊಲೀಸ್ ಪಡೆಗಳು ಕಾರ್ಯನಿರ್ವಹಿಸುತ್ತಿವೆ. ದೇಶ ಕಾಯುವ ವೃತ್ತಿಯೂ ಒಂದು ಪವಿತ್ರ ವಾದ ವೃತ್ತಿ. ನಿಮ್ಮ ಚಿತ್ತ ಅಂಥ ವೃತ್ತಿಯನ್ನು ಆಯ್ದುಕೊಳ್ಳುವ ಕಡೆಗಿರಲಿ ಎಂದರು. ಎಕ್ಸಲೆಂಟ್ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ರಶ್ಮಿತಾ ಜೈನ್ ತಮ್ಮ ಅಧ್ಯಕ್ಷೀಯ ಮಾತುಗಳಲ್ಲಿ ಶಿಸ್ತಿನ ಜೀವನವನ್ನು ನಡೆಸುವಲ್ಲಿ ಎನ್ಸಿಸಿ ನೆರವಾಗುತ್ತದೆ. ಅದೇ ರೀತಿ ನಿಮ್ಮ ಆಸಕ್ತಿ ಯೋಗ್ಯತೆಗನುಗುಣವಾಗಿ ಸೇವೆ ಸಲ್ಲಿಸಲು ಹಲವಾರು ವೃತ್ತಿಗಳಿರುದನ್ನು ಗಮನಿಸಿ ನಿಮ್ಮ ಗುರಿಯನ್ನು ನಿರ್ಧರಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಹಿತವಾದ ಹೇಳಿದರು.
Related Articles
Advertisement
ಸಂಸ್ಥೆಯ ಅಧ್ಯಕ್ಷ ಯುವರಾಜ ಜೈನ್, ಪ್ರಾಂಶುಪಾಲರಾದ ಪ್ರದೀಪ್ ಕುಮಾರ್ ಶೆಟ್ಟಿ, ಎಕ್ಸಲೆಂಟ್ ಆಂ.ಮಾ. ಶಾಲೆಯಮುಖ್ಯೋಪಾಧ್ಯಾಯ ಶಿವಪ್ರಸಾದ ಭಟ್, ಎಎನ್ಒ 18 ಕಾರ್ ಆರ್ಮಿ ಎನ್ಸಿಸಿ ಸಬ್ ಯೂನಿಟ್ನ ಲೆ|| ಮಹೇಂದ್ರ ಜೈನ್, 5 ಕಾರ್ ನೇವಲ್ ಸಬ್ ಯೂನಿಟ್ ಕೇರ್ ಟೇಕರ್ ರಾಜ್ ಪ್ರಸಾದ್, ಸೀನಿಯರ್ ಕೆಡೆಟ್ ಸ್ಫೂರ್ತಿ ಬೈಲೂರು ಉಪಸ್ಥಿತರಿದ್ದರು. ಸಿಪಿಎಲ್ ಮೋನಿಶ್ ಗೌಡ ಸ್ವಾಗತಿಸಿದರು. ಸಿಎಸ್ ಎಂ ಪೂರ್ಣಚಂದ್ರ ವಂದಿಸಿದರು. ಸಿಕ್ಯೂಎಂಎಸ್ ಶ್ರೇಯಾ ಪಿಳ್ಳೈ ನಿರೂಪಿಸಿದರು.