Advertisement

ವಿಚಾರಣೆ ಡಿಲೇ ಮಾಡಿದ್ದಕ್ಕೆ ನ್ಯಾಯಾಧೀಶರಿಗೆ ಕೋವಿಡ್ ಸೋಂಕು ಬರಲಿ ಎಂದು ಶಾಪ ಹಾಕಿದ ವಕೀಲ!

09:12 AM Apr 09, 2020 | Hari Prasad |

ಸಾಲ ಮರುಪಾವತಿ ಪ್ರಕರಣ ಇತ್ಯರ್ಥ ತಡವಾಗಿದ್ದಕ್ಕೆ ವಕೀಲರೊಬ್ಬರು, ನ್ಯಾಯಾಧೀಶರಿಗೇ ‘ಕೋವಿಡ್ ಶಾಪ’ ಹಾಕಿದ ವಿಚಿತ್ರ ಘಟನೆ ಕಲ್ಕತ್ತಾ ಹೈಕೋರ್ಟ್‌ನಲ್ಲಿ ನಡೆದಿದೆ. ಸಾಲ ತೀರಿಸದ್ದಕ್ಕೆ ಬ್ಯಾಂಕ್‌, ಬಸ್ಸನ್ನು ವಶಕ್ಕೆ ಪಡೆದುಕೊಂಡಿತ್ತು. ಈ ಪ್ರಕರಣವನ್ನು ತುರ್ತಾಗಿ ಪರಿಗಣಿಸಲು, ಜನವರಿಯಲ್ಲಿ  ಕೋರ್ಟ್‌ ನಿರಾಕರಿಸಿತ್ತು.

Advertisement

ಇದೀಗ ಪ್ರಕರಣಗಳ ವಿಚಾರಣೆಗಳೆಲ್ಲಾ ವಿಡಿಯೊ ಕಾನ್ಫರೆನ್ಸ್‌ ಮೂಲಕ ನಡೆಯುತ್ತಿವೆ. ಈ ನಡುವೆ ತನ್ನ ಕಕ್ಷಿದಾರರ ಪ್ರಕರಣ ಇತ್ಯರ್ಥ ತಡವಾದುದಕ್ಕೆ ವಕೀಲ, ಕಲಾಪದ ನಡುವೆಯೇ ಜಡ್ಜ್ ಗೆ ‘ನಿಮಗೆ ಕೋವಿಡ್ ವೈರಸ್ ಸೋಂಕು ತಗುಲಲಿ’ ಎಂದು ಹೇಳಿದ್ದಾರೆ.  ವಕೀಲನ ವರ್ತನೆಯನ್ನು ಜಡ್ಜ್ ತೀವ್ರವಾಗಿ ಖಂಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next