Advertisement

ರಷ್ಯಾದಲ್ಲಿ ಆಹಾರ ಹಾಹಾಕಾರ; ಆಹಾರ ವಸ್ತುಗಳ ಮಿತ ಬಳಕೆಗೆ ಪುತಿನ್‌ ಸರಕಾರದಿಂದ ಆದೇಶ

12:59 AM Mar 07, 2022 | Team Udayavani |

ಮಾಸ್ಕೋ/ಕೀವ್‌: “ಮಿತಿಯಿಂದ ಆಹಾರ ವಸ್ತುಗಳನ್ನು ಮಾರಾಟ ಮಾಡಿ’ ಇಂಥ ಒಂದು ಸೂಚನೆಯನ್ನು ರಷ್ಯಾದ ಆಹಾರ ಮತ್ತು ಅಗತ್ಯ ವಸ್ತುಗಳನ್ನು ಮಾರಾಟ ಮಾಡುವ ಮಳಿಗೆಗಳಿಗೆ ನೀಡಲಾಗಿದೆ. ಹಾಗಿದ್ದರೆ ಉಕ್ರೇನ್‌ಗೆ ದಾಳಿ ನಡೆಸಿದ ರಾಷ್ಟ್ರದಲ್ಲಿ ಈಗ ಆಹಾರ ಮತ್ತು ಅಗತ್ಯ ವಸ್ತುಗಳಿಗೆ ಹಾಹಾಕಾರ ಎದ್ದಿದೆಯೇ ಎಂಬ ಗುಸು ಗುಸು ಶುರುವಾಗಿದೆ. ರಾಜಧಾನಿ ಮಾಸ್ಕೋ ಮತ್ತು ಇತರ ನಗರಗಳಲ್ಲಿನ ಮಳಿಗೆಗಳಿಗೆ ಇಂಥ ಸೂಚನೆ ಹೋಗಿದೆ.

Advertisement

ಫೆ.24ರಿಂದ ದಾಳಿ ಶುರುವಾದ ಬಳಿಕ ರಷ್ಯಾದಲ್ಲಿ ಜನರು ಅಗತ್ಯಕ್ಕಿಂತ ಹೆಚ್ಚು ಆಹಾರ- ಬೇಳೆ ಕಾಳುಗಳನ್ನು ಖರೀದಿ ಮಾಡುತ್ತಿದ್ದಾರೆ. ಇದರಿಂದಾಗಿ ಕಾಳಸಂತೆ ಕೋರರು ಪರಿಸ್ಥಿತಿಯ ದುರ್ಲಾಭ ಪಡೆದುಕೊಳ್ಳಬಾರದು ಎಂಬ ಕಾರಣಕ್ಕಾಗಿ ಪುತಿನ್‌ ಸರಕಾರ ಅಂಗಡಿಗಳಲ್ಲಿ ಜನರಿಗೆ ಬೇಕಾಗುವಷ್ಟೇ ಆಹಾರ ವಸ್ತುಗಳ ಮಾರಾಟ ಮಾಡುವಂತೆ ನಿರ್ಬಂಧ ಹೇರಿದೆೆ ಎಂಬ ಸಮಜಾಯಿಷಿ ಬೆಂಬಲಿಗ ರದ್ದು ಮತ್ತು ಸರಕಾರದ್ದು. ಬ್ರೆಡ್‌, ಅಕ್ಕಿ, ಮೊಟ್ಟೆ, ಮಾಂಸ ಮತ್ತು ಇತರ ಕೆಲವು ವಸ್ತು ಗಳ ಬೆಲೆಯನ್ನು ಸರಕಾರವೇ ನಿಯಂತ್ರಣ ಮಾಡುತ್ತದೆ. ಹೀಗಾಗಿ ಅವುಗಳನ್ನು ನೀಡುವುದರ ಮೇಲೆ ಮಿತಿ ಹೇರಿಕೆ ಮಾಡಿದ್ದು ಹಲವು ಜಿಜ್ಞಾಸೆಗಳಿಗೆ ಕಾರಣವಾಗಿದೆ.

ಏಕೆಂದರೆ ಅಮೆರಿಕ, ಯು.ಕೆ. ಐರೋಪ್ಯ ಒಕ್ಕೂಟ ಸೇರಿದಂತೆ ಜಗತ್ತಿನ ಹೆಚ್ಚಾ ಕಮ್ಮಿ ಹಲವು ರಾಷ್ಟ್ರಗಳು ಪುತಿನ್‌ ಆಡಳಿತದ ಮೇಲೆ ಒಂದಲ್ಲ ಒಂದು ರೀತಿಯ ನಿರ್ಬಂಧ ಹೇರಿವೆ. ಜತೆಗೆ ಪಾಶ್ಚಾತ್ಯ ರಾಷ್ಟ್ರಗಳ ವಿತ್ತೀಯ, ತಾಂತ್ರಿಕ, ಉದ್ಯಮಾಡಳಿತ, ಮನರಂಜನೆ, ವಿತ್ತೀಯ ಸಲಹಾ ಸಂಸ್ಥೆಗಳು ರಷ್ಯಾದಲ್ಲಿನ ತಮ್ಮ ಸೇವೆಗಳನ್ನು ರದ್ದುಪಡಿಸಲು ತೀರ್ಮಾನಿಸಿವೆ.

ಜಗತ್ತಿಗೂ ಬೆದರಿಕೆಯೇ: ಉಕ್ರೇನ್‌ ಮೇಲೆ ದಾಳಿ ನಡೆಯುತ್ತಿರುವುದರಿಂದ ಅಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದವರೂ ಜಮೀನು ತೊರೆದು ಪರಾರಿಯಾಗುತ್ತಿ ದ್ದಾರೆ. ಆ ದೇಶದಲ್ಲಿ ಹೆಚ್ಚಿನ ರೀತಿಯಲ್ಲಿ ಗೋಧಿ ಬೆಳೆಯಲಾಗುತ್ತಿದೆ. ಕೆಲವೆಡೆ ಗೋಧಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಆತಂಕ ಉಂಟಾಗಿರುವಂತೆಯೇ ಶೇ.55ರಷ್ಟು ಬೆಲೆಯೂ ಏರಿಕೆಯಾಗಿದೆ. ಪರಿಸ್ಥಿತಿ ಜಗತ್ತಿನ ಆಹಾರ ಪೂರೈಕೆ ವ್ಯವಸ್ಥೆಗೆ ಕೂಡ ತಡೆಯಾಗುವ ಬಗ್ಗೆ ಆತಂಕ ವ್ಯಕ್ತವಾಗುತ್ತಿದೆ.

ಹಸಿದಿದ್ದರೂ ಸ್ವಾಭಿಮಾನ ಬಿಡದ ಖಾರ್ಕಿವ್‌ ಜನ
ರಷ್ಯಾದ ದಾಳಿಯಿಂದ ಖಾರ್ಕಿವ್‌ ನಗರದ ಮೂಲಸೌಕರ್ಯಗಳು ಅಕ್ಷರಶಃ ನಾಶವಾಗಿದ್ದು, ಅಲ್ಲಿನ ಸುಮಾರು 3 ಲಕ್ಷ ಜನರು, ಜೀವನಕ್ಕೆ ಆಧಾರವಾದ ಆಹಾರ, ನೀರಿನ ಅಭಾವ ಎಂದುರಿಸುತ್ತಿದ್ದಾರೆ. ಈ ನಡುವೆ ರಷ್ಯಾದ ಸೈನಿಕರು ಜನರಿಗೆ ಅಲ್ಪಸ್ವಲ್ಪ ಆಹಾರದ ನೆರವು ನೀಡಲು ಮುಂದೆ ಬಂದರೂ ಖಾರ್ಕಿವ್‌ನ ಜನರು ಸ್ವಾಭಿಮಾನದಿಂದಾಗಿ ನೆರವು ನಿರಾಕರಿಸುತ್ತಿದ್ದಾರೆ ಎಂದು ಆ ನಗರದ ಮೇಯರ್‌ ಐಹೊರ್‌ ಕೋಲಿಖೇವ್‌ ತಿಳಿಸಿದ್ದಾರೆ. ಇಡೀ ನಗರ ಇಂದು ರಷ್ಯಾ ಪಡೆಗಳ ಹಿಡಿತದಲ್ಲಿದೆ. ಅಲ್ಲಿನ ಜನರು, ಅವಕಾಶ ಸಿಕ್ಕಾಗ ತಮ್ಮ ಮನೆಗಳಿಂದ ಹೊರಹೋಗಿ, ದಿನಸಿ ಅಂಗಡಿಗಳನ್ನು ತಡಕಾಡುತ್ತಿದ್ದಾರೆ. ಆದರೆ ಅಂಗಡಿಗಳಲ್ಲಿ ದಿನಸಿ ಖಾಲಿಯಾಗಿದೆ. ಇದು ಅಲ್ಲಿನ ಜನರನ್ನು ಕಂಗಾಲಾಗಿಸಿದೆ ಎಂದು ಸಿಎನ್‌ಎನ್‌ ಸುದ್ದಿ ಸಂಸ್ಥೆ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next