Advertisement

Kadur: ಕಾರಿನ ಬಾನೆಟ್ ನಲ್ಲಿ ಕಾಣಿಸಿಕೊಂಡ ಬೆಂಕಿ; ಅಪಾಯದಿಂದ ಪಾರು

06:53 PM Jun 08, 2024 | Team Udayavani |

ಕಡೂರು: ತಾಲೂಕಿನ ಸರಸ್ಪತಿಪುರ ಸಮೀಪ ಹೊಂಡಾ ಸಿಟಿ ಕಾರಿನ ಬಾನೆಟ್ ನಲ್ಲಿ ಬೆಂಕಿ ಕಾಣಿಸಿಕೊಂಡು ಸುಟ್ಟು ಹೋಗಿದ್ದು. ಚಾಲಕ ಸೇರಿದಂತೆ ಮೂರು ಜನರು ಅಪಾಯದಿಂದ ಪಾರಾಗಿದ್ದಾರೆ.

Advertisement

ಧಾರವಾಡದ ಸುರೇಂದ್ರ ದೊಡ್ಡಮನಿ ಎಂಬುವರಿಗೆ ಸೇರಿರುವ ಈ ಕಾರು ಅವರ ಸಂಬಂದಿಕರು ಚಾಲಕನನ್ನು ಕರೆದುಕೊಂಡು ಚಿಕ್ಕಮಗಳೂರು ಸಮೀಪ ಇರುವ ಮುಳ್ಳಯ್ಯನಗಿರಿ,ದತ್ತಪೀಠ ಮತ್ತಿತರ ಸ್ಥಳಗಳನ್ನು ನೋಡಿಕೊಂಡು ಮರಳಿ ಊರಿಗೆ ಹೋಗುವಾಗ ಕಡೂರು ಸಮೀಪ ಘಟನೆ ನಡೆದಿದೆ.

ಕಡೂರು ಅಗ್ನಿಶಾಮಕ ಸಿಬ್ಬಂದಿ ವಿಷಯ ತಿಳಿದು ಸ್ಥಳಕ್ಕೆ ತೆರಳಿ ಉರಿಯುತ್ತಿದ್ದ ಕಾರಿನ ಬೆಂಕಿಯನ್ನು ನಂದಿಸಿದ್ದಾರೆ. ಕಡೂರು ಪೊಲೀಸ್‌ ಠಾಣೆಯಲ್ಲಿ ಚಾಲಕ ಆಶೋಕ ದೂರು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next