Advertisement

ಕರ್ತವ್ಯನಿರತ ಯೋಧ ನಾಪತ್ತೆ

07:20 AM May 05, 2018 | Team Udayavani |

ಶಿರಸಿ: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯ ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಅರೆ ಸೇನಾಪಡೆಯ ಯೋಧನೊಬ್ಬ ನಾಪತ್ತೆ ಆಗಿದ್ದಾನೆ. 

Advertisement

ಉತ್ತರ ಪ್ರದೇಶದ 49ನೇ ಬೆಟಾಲಿಯನ್‌ ಕಾನ್ಸ್‌ಟೇಬಲ್‌ ಕೆ.ಗಣೇಶ ಕಾಣೆಯಾಗಿದ್ದಾರೆ. ತಾಲೂಕಿನ ದಾಸನಕೊಪ್ಪ ತನಿಖಾ ಠಾಣೆಯಲ್ಲಿ ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಗಣೇಶ್‌, ಬುಧವಾರ ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಮೂತ್ರ ವಿಸರ್ಜನೆಗೆ ಹೋಗುತ್ತೇನೆಂದು ಹೇಳಿ ಹೋದವರು ನಾಪತ್ತೆಯಾಗಿದ್ದಾರೆ.

ಕರ್ತವ್ಯದಲ್ಲಿದ್ದಾಗ ಬಳಸುತ್ತಿದ್ದ ರೈಫಲ್‌ ಸಮೇತ ಕಾಣೆಯಾಗಿದ್ದು, ಬನವಾಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ದಾಸನಕೊಪ್ಪಕ್ಕೆ ಭೇಟಿ ನೀಡಿ ಸಹಚರರಿಂದ ಮಾಹಿತಿ ಪಡೆದುಕೊಂಡು ಯೋಧನಿಗಾಗಿ ಶೋಧ ನಡೆಸುತ್ತಿದ್ದಾರೆ. ಶುಕ್ರವಾರ ರಾತ್ರಿ ತನಕವೂ ಪತ್ತೆಯಾದ ವರದಿಯಾಗಿಲ್ಲ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next