Advertisement

ಕರಾವಳಿಗೆ ಮುಂದುವರಿದ ಪ್ರವಾಸಿಗರ ಪ್ರವಾಹ; ದೇಗುಲ, ಬೀಚ್‌ಗಳಲ್ಲಿ ಜನಸಂದಣಿ

12:48 AM May 13, 2024 | Team Udayavani |

ಸುಬ್ರಹ್ಮಣ್ಯ/ಧರ್ಮಸ್ಥಳ/ಕೊಲ್ಲೂರು: ವಾರಾಂತ್ಯ ರಜೆಯ ಹಿನ್ನೆಲೆಯಲ್ಲಿ ರವಿವಾರವೂ ಕರಾವಳಿಯ ಎಲ್ಲ ಪ್ರಮುಖ ದೇಗುಲಗಳು ಸೇರಿದಂತೆ ಬೀಚ್‌ಗಳಲ್ಲಿಯೂ ಪ್ರವಾಸಿಗರ ಸಂಖ್ಯೆ ಅಧಿಕವಾಗಿತ್ತು.

Advertisement

ದ.ಕ. ಜಿಲ್ಲೆಯ ಕುಕ್ಕೆ ಶ್ರೀ ಸುಬ್ರಹ್ಮಣ್ಯ, ಶ್ರೀಕ್ಷೇತ್ರ ಧರ್ಮಸ್ಥಳ, ಸೌತಡ್ಕ ಶ್ರೀ ಮಹಾಗಣಪತಿ, ಸುರ್ಯ ಸದಾಶಿವ ದೇವಸ್ಥಾನ, ಕಟೀಲು ಶ್ರೀ ದುರ್ಗಾಪರಮೇಶ್ವರೀ, ಉಡುಪಿ ಶ್ರೀಕೃಷ್ಣ ಮಠ, ಕೊಲ್ಲೂರು ಶ್ರೀ ಮುಕಾಂಬಿಕಾ ದೇಗುಲ, ಆನೆಗುಡ್ಡೆ, ಹಟ್ಟಿಯಂಗಡಿ ಗಣಪತಿ ದೇಗುಲಗಳಿಗೆ ಅನೇಕ ಭಕ್ತರು ಭೇಟಿ ನೀಡಿ ಶ್ರೀ ದೇವರ ಪ್ರಸಾದ ಸ್ವೀಕರಿಸಿದರು.

ಕೊಲ್ಲೂರಿನಲ್ಲಿ ಜನಸಾಗರ
ಕೊಲ್ಲೂರು ದೇಗುಲದಲ್ಲಿ ರವಿವಾರ ಶಂಕರ ಜಯಂತಿ ಪ್ರಯುಕ್ತ ದಾಖಲೆಯ ಭಕ್ತರು ಆಗಮಿಸಿದ್ದು, ಶ್ರೀದೇವಿಯ ದರ್ಶನಕ್ಕೆ ತಾಸು ಗಟ್ಟಲೇ ಕಾಯ ಬೇಕಾಯಿತು. ದೇಗುಲದ ಒಳ ಹಾಗೂ ಹೊರಪೌಳಿ ಕಳೆದ ಮೂರು ದಿನಗಳಿಂದ ದೇಗುಲ ಸಹಿತ ವಸತಿಗೃಹಗಳು ಭರ್ತಿಯಾಗಿದ್ದು, ಅನೇಕರು ಹೆಮ್ಮಾಡಿ ಹಾಗೂ ಕುಂದಾಪುರವನ್ನು ಅವಲಂಬಿಸಬೇಕಾಯಿತು.

 

Advertisement

Udayavani is now on Telegram. Click here to join our channel and stay updated with the latest news.

Next