Advertisement

Kukke Subrahmanya Temple; ತ್ರೋಡೌನ್‌ ಸ್ಪೆಷಲಿಸ್ಟ್‌ ರಾಘವೇಂದ್ರ ಮಹಾಭಿಷೇಕ ಸೇವೆ

01:41 AM Jul 11, 2024 | Team Udayavani |

ಸುಬ್ರಹ್ಮಣ್ಯ: ಟೀಮ್‌ ಇಂಡಿಯಾದ ತ್ರೋಡೌನ್‌ ಸ್ಪೆಷಲಿಸ್ಟ್‌ ರಾಘವೇಂದ್ರ ಅವರು ಬುಧವಾರ ಕುಕ್ಕೆ ಸುಬ್ರಹ್ಮಣ್ಯದ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದರು.

Advertisement

ಆರಂಭದಲ್ಲಿ ದೇವರ ದರುಶನ ಮಾಡಿ ಸಂಕಲ್ಪ ಮಾಡಿದರು. ಬಳಿಕ ದೇವರಿಗೆ ಮಹಾಭಿಷೇಕ ಸೇವೆ ಸಮರ್ಪಿಸಿದರು. ಈ ಹಿಂದೆ ಕುಕ್ಕೆಗೆ ಬಂದು ಟೀಮ್‌ ಇಂಡಿಯಾ ವಿಶ್ವ ಚಾಂಪಿಯನ್‌ ಆದರೆ ಸೇವೆ ನೆರವೇರಿಸುವುದಾಗಿ ಪ್ರಾರ್ಥನೆ ಸಲ್ಲಿಸಿದ್ದರು.

ಆ ಪ್ರಕಾರ ಬುಧವಾರ ಸುಬ್ರಹ್ಮಣ್ಯನಿಗೆ ಸೇವೆ ಸಮರ್ಪಿಸಿದರು.

ರಾಘವೇಂದ್ರ ಅವರಿಗೆ ದೇಗುಲದ ಅರ್ಚಕ ರಾಮಕೃಷ್ಣ ನೂರಿತ್ತಾಯ ಅವರು ಶಾಲು ಹೊದಿಸಿ ಮಹಾಪ್ರಸಾದ ಮತ್ತು ಮಹಾಭಿ ಷೇಕದ ಪ್ರಸಾದ ನೀಡಿದರು.

ದೇಗುಲದ ಆಡಳಿತ ಕಚೇರಿಗೆ ತೆರಳಿದ ಅವರನ್ನು ಸಹಾಯಕ ಕಾರ್ಯ ನಿರ್ವಹಣಾಧಿಕಾರಿ ಯೇಸುರಾಜು ಸ್ವಾಗತಿಸಿದರು. ದೇಗುಲದ ಶಿಷ್ಟಾಚಾರ ವಿಭಾಗದ ಪ್ರಮೋದ್‌ ಕುಮಾರ್‌ ಎಸ್‌., ಹರೀಶ್‌, ದೇಗುಲದ ಕೃಷ್ಣಪ್ರಸಾದ್‌ ಕೆ.ಜಿ. ಭಟ್‌, ಸುಬ್ರಹ್ಮಣ್ಯದ ಅವರ ಸ್ನೇಹಿತರಾದ ಪಪ್ಪು ಲೋಕೇಶ್‌, ದೀಪಕ್‌ ನಂಬಿಯಾರ್‌ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next