Advertisement

ಸುರತ್ಕಲ್: ನಿಯಂತ್ರಣ ತಪ್ಪಿ ಡಿವೈಡರ್‌ ಹಾರಿದ ಕಂಟೇನರ್; ಇಬ್ಬರಿಗೆ ಗಾಯ

02:20 PM Dec 24, 2022 | Team Udayavani |

ಸುರತ್ಕಲ್: ಸಮೀಪದ ಹೊನ್ನಕಟ್ಟೆ ಜಂಕ್ಷನ್ ಬಳಿ ಕಂಟೇನರ್ ವಾಹನವೊಂದು ನಿಯಂತ್ರಣ ತಪ್ಪಿ ಡಿವೈಡರ್ ಹಾರಿದ ಘಟನೆ ಶನಿವಾರ (ಡಿ.24 ರಂದು) ಬೆಳಿಗ್ಗೆ ಸಂಭವಿಸಿದೆ.

Advertisement

ಮಂಗಳೂರು ಕಡೆಯಿಂದ ಉಡುಪಿ ಕಡೆ ಹೋಗುವ ಸಂದರ್ಭ ಕುಳಾಯಿ ಜಂಕ್ಷನ್ ನಲ್ಲಿ ಸಿಗ್ನಲ್ ಹಾಕಿದ ವೇಳೆ ಏಕಾಏಕಿ ಬ್ರೇಕ್ ಹಾಕಿದ ಪರಿಣಾಮ ನಿಯಂತ್ರಣ ತಪ್ಪಿ ಎರಡು ದ್ವಿಚಕ್ರ ವಾಹನಗಳಿಗೆ  ಢಿಕ್ಕಿ ಹೊಡೆದಿದೆ. ಓರ್ವ ಪಾದಾಚಾರಿ ಮಹಿಳೆಗೆ ಹಾಗೂ ದ್ವಿಚಕ್ರ ಸವಾರನಿಗೆ  ಗಾಯವಾಗಿದೆ.

ಮಂಗಳೂರು ಉತ್ತರ ಸಂಚಾರಿ ಪೊಲೀಸರು ಆಗಮಿಸಿ ಟ್ರಾಫಿಕ್ ಸಂಚಾರ ನಿಯಂತ್ರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next