Advertisement

ವಕೀಲನ ವಿರುದ್ಧ ಮಾನಭಂಗ ಯತ್ನ ದೂರು

10:56 PM Feb 12, 2020 | Team Udayavani |

ಶಿವಮೊಗ್ಗ: ಸಿಎಂ ಯಡಿಯೂರಪ್ಪ, ಸಚಿವ ಈಶ್ವರಪ್ಪ ಅವರ ವಿರುದ್ಧ ಈ ಹಿಂದೆ ಕೇಸ್‌ ದಾಖಲಿಸಿ ನ್ಯಾಯಾಲಯಕ್ಕೆ ಅಲೆದಾಡಿಸಿದ್ದ ಇಲ್ಲಿನ ಕ್ರಿಮಿನಲ್‌ ಲಾಯರ್‌ ಪಿ. ವಿನೋದ್‌ ವಿರುದ್ಧ ಈಗ ಮಾನಭಂಗ ಯತ್ನ ಆರೋಪದ ದೂರು ದಾಖಲಾಗಿದೆ. ಶರಾವತಿ ನಗರದ ಮಹಿಳೆಯೊಬ್ಬರು ದೂರು ನೀಡಿದ್ದು, ಬಾಕಿ ಹಣ ಕೇಳಲು ಹೋದಾಗ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

Advertisement

ದೂರುದಾರ ಮಹಿಳೆಯ ಪತಿ ಜ್ಯುವೆಲ್ಲರಿ ಶಾಪ್ ಹೊಂದಿದ್ದು, ಅಲ್ಲಿ ವಿನೋದ್‌ ಅವರು 3.69 ಲಕ್ಷ ರೂ. ಮೌಲ್ಯದ ಬಂಗಾ ರದ ನೆಕ್ಲೆಸ್‌ ಖರೀದಿಸಿದ್ದರು. ಖರೀದಿ ವೇಳೆ ಕೇವಲ 40 ಸಾವಿರ ರೂ. ಮಾತ್ರ ನೀಡಿದ್ದರು. ಇದರ ಬಾಕಿ ಹಣ ಕೇಳಲು ಫೆ.6ರಂದು ವಕೀಲ ವಿನೋದ್‌ ಮನೆಗೆ ದೂರುದಾರೆ ತೆರಳಿ ದಾಗ ಅಸಭ್ಯವಾಗಿ ವರ್ತಿಸಿದ್ದಾರೆ. ಅಲ್ಲದೆಮನೆಯಿಂದ ಹೊರಹೋಗಲು ಬಿಡದಂತೆ ತಡೆದಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ವಕೀಲ ವಿನೋದ್‌, ಸತ್ಯ ಹಾಗೂ ಇತರರ ವಿರುದ್ಧ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next