Advertisement

ದೇವಾಲಯ ಕಟ್ಟಲು ಖಾಸಗಿ ವ್ಯಕ್ತಿಗಳ ಕಿರುಕುಳ: ಪಿಡಿಒಗೆ ಗ್ರಾಮಸ್ಥರಿಂದ ದೂರು

06:32 PM Dec 06, 2021 | Team Udayavani |

ಪಿರಿಯಾಪಟ್ಟಣ: ಗ್ರಾಮದ ನಡುವೆ ಖಾಲಿ ಇರುವ ಗ್ರಾಮ ಠಾಣಾ ಜಾಗದಲ್ಲಿ ದೇವಾಲಯವನ್ನು ಕಟ್ಟಲ್ಲಿ ಕಟ್ಟಲು ಅನುವು ಮಾಡಿಕೊಡಬೇಕು ಎಂದು ಒತ್ತಾಯಿಸಿ ರಾಮನಾಥ ತುಂಗ ಪಿಡಿಒ ಅಭಿವೃದ್ದಿ ಅಧಿಕಾರಿ ಶ್ರೀಕಾಂತ್ ಕೊಟ್ಟಿಗೆಯವರಿಗೆ  ಗ್ರಾಮಸ್ಥರು ಸೋಮವಾರ ಮನವಿ ಪತ್ರ ಸಲ್ಲಿಸಿದರು.

Advertisement

ತಾಲ್ಲೂಕಿನ ರಾಮನಾಥ ತುಂಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಡ್ಡರಕೇರಿ ಗ್ರಾಮದಲ್ಲಿ ಗ್ರಾಮ ಠಾಣಾ ಜಾಗವನ್ನು ಹಿಂದಿನಿಂದಲೂ ಗ್ರಾಮದ ದೇವಾಲಯಕ್ಕೆಂದು ಮೀಸಲಿಡಲಾಗಿದೆ ಆದರೆ ಇತ್ತಿಚಿಗೆ ಕೆಲವರು ಸ್ವಾರ್ಥ ಸಾಧನೆಗಾಗಿ ಜಾಗವನ್ನು ಕಬಳಿಸಲು ಹುನ್ನಾರ ನಡೆಸಿ ಜಾಗವನ್ನು ಕಬಳಿಸಲು ಮುಂದಾಗಿ ದೇವಾಲಯ ಕಟ್ಟಲು ಅಡ್ಡಿ ಪಡಿಸುತ್ತಿದ್ದಾರೆ. ಆದ್ದರಿಂದ ಗ್ರಾಮದಲ್ಲಿ ದೇವಾಲಯ ಕಟ್ಟಲು ಅನುವು ಮಾಡಿಕೊಡಬೇಕು ಹಾಗೂ ಈ ಜಾಗವನ್ನು ದೇವಾಲಯದ ಹೆಸರಿಗೆ ಖಾತೆ ಮಾಡಿಕೊಡಬೇಕು ಎಂದು ಪಂಚಾಯಿತಿ ಅಭಿವೃದ್ದಿ ಅಧಿಕಾರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಗ್ರಾ.ಪಂ ಮಾಜಿ ಉಪಾಧ್ಯಕ್ಷ ಮುತ್ತುರಾಜು, ರವಿ, ಚಂದ್ರಶೇಖರ್, ಅಶೋಕ್, ರೇವಣ್ಣ, ರಮೇಶ್, ಶ್ರೀಧರ್, ಮಲ್ಲೇಶ್, ಚಂದ್ರೇಶ್, ಯಲ್ಲಪ್ಪ, ಮರೀಗೌಡ, ಜಯಶಂಕರ್, ರಾಮು, ಮಂಜು, ಸ್ವಾಮಿ, ಲೋಕೇಶ್ ಸೇರಿದಂತೆ ಮತ್ತಿತರರು ಹಾಜರಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next