Advertisement

ಮೋದಿ ಮತ್ತೂಮ್ಮೆ ಪ್ರಧಾನಿಯಾಗಲಿ ಎಂದು ಮಾದಪ್ಪನ ಬೆಟ್ಟ ಹತ್ತಿದ್ದ ಶತಾಯುಷಿ ಅಜ್ಜಿ!

10:33 PM Mar 07, 2024 | Team Udayavani |

ಕೊಳ್ಳೇಗಾಲ: ನರೇಂದ್ರ ಮೋದಿ ಮತ್ತೂಮ್ಮೆ ಪ್ರಧಾನಿಯಾಗಬೇಕು. ದೇಶದ ರೈತರಿಗೆ ಒಳ್ಳೆಯದಾಗಬೇಕೆಂದು ಬೇಡಿಕೊಂಡು 102 ವರ್ಷದ ಅಜ್ಜಿಯೊಬ್ಬರು ಪಾದಯಾತ್ರೆ ಮೂಲಕ ಮಲೆಮಹದೇಶ್ವರ ಬೆಟ್ಟ ಹತ್ತಿ ಪ್ರಾರ್ಥನೆ ಸಲ್ಲಿಸಿದ್ದಾರೆ.

Advertisement

ತುಮಕೂರು ಜಿಲ್ಲೆಯ ತಿಪಟೂರು ಮೂಲದ ಪಾರ್ವತಮ್ಮ ಅವರು ಬೆಟ್ಟ ಹತ್ತುತ್ತಿದ್ದಾಗ, “ಈ ವಯಸ್ಸಿನಲ್ಲಿ ಯಾಕೆ ಪಾದಯಾತ್ರೆ’  ಇತರ ಯಾತ್ರಿಕರು  ಪ್ರಶ್ನಿಸಿದ್ದಾರೆ. ಈ ವೇಳೆ ಅಜ್ಜಿ ತಮ್ಮ ವಯಸ್ಸನ್ನು ತಿಳಿಸಿ,  “ಉತ್ತಮ ಮಳೆಯಾಗಬೇಕು, ಇದರಿಂದ ರೈತರಿಗೆ ಅನುಕೂಲವಾಗಲಿದೆ. ವನ್ಯ ಪ್ರಾಣಿಗಳಿಗೆ ನೀರಿನ ದಾಹ ಕಡಿಮೆಯಾಗುತ್ತದೆ. ನರೇಂದ್ರ ಮೋದಿ ಮತ್ತೂಮ್ಮೆ ಪ್ರಧಾನಿಯಾಗಬೇಕು’ ಎಂದು ಹೇಳಿದ್ದಾರೆ.

ಈ ವೇಳೆ ಯುವಕರು ನರೇಂದ್ರ ಮೋದಿ ಯಾಕೆ ಮತ್ತೂಮ್ಮೆ ಬರಬೇಕು ಎಂದಾಗ  “ದೇಶಕ್ಕೆ ಒಳ್ಳೆಯದು ಮಾಡಲು’ ಎಂದು ಶತಾಯಿಷಿ ಅಜ್ಜಿ ಹೇಳಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next