Advertisement

Ratan Tata: ರತನ್‌ ಟಾಟಾಗೆ ಉದ್ಯೋಗ ರತ್ನದ ಗರಿ

11:58 PM Aug 19, 2023 | Team Udayavani |

ಮುಂಬೈ: ಭಾರತದ ಖ್ಯಾತ ಉದ್ಯಮಿ ರತನ್‌ ಟಾಟಾ ಅವರಿಗೆ ಶನಿವಾರ ಮಹಾರಾಷ್ಟ್ರ ಸರ್ಕಾರವು ಉದ್ಯೋಗ ರತ್ನ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಿದೆ. ಮುಖ್ಯಮಂತ್ರಿ ಏಕನಾಥ ಶಿಂಧೆ ಹಾಗೂ ಉಪ ಮುಖ್ಯಮಂತ್ರಿಗಳಾದ ದೇವೇಂದ್ರ ಫ‌ಡ್ನವೀಸ್‌ ಮತ್ತು ಅಜಿತ್‌ ಪವಾರ್‌ ಅವರು ಸೇರಿ, ರತನ್‌ ಟಾಟಾ ಅವರಿಗೆ ಅವರ ನಿವಾಸದಲ್ಲೇ ಪ್ರಶಸ್ತಿಯನ್ನು ಪ್ರದಾನ ಮಾಡಿದ್ದಾರೆ.

Advertisement

ಈ ಕುರಿತು ಮಾತನಾಡಿದ ಸಿಎಂ ಶಿಂಧೆ, ಟಾಟಾ ಸಮೂಹ ಸಂಸ್ಥೆಯು ದೇಶದ ಹಲವಾರು ಕ್ಷೇತ್ರಗಳಿಗೆ ಅತ್ಯುನ್ನತ ಕೊಡುಗೆ ನೀಡಿದೆ. ಟಾಟಾ ಎಂದರೆ ನಂಬಿಕೆ. ರತನ್‌ ಟಾಟಾ ಅವರಿಗೆ ಉದ್ಯೋಗ ರತ್ನ ಪ್ರಶಸ್ತಿ ನೀಡುವ ಮೂಲಕ ಪ್ರಶಸ್ತಿಯ ಗೌರವವೇ ಹೆಚ್ಚಾಗಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next