Advertisement

ಚೋರ್ಲಾ ಘಾಟ್‍ನಲ್ಲಿ ನಾಲೆಗೆ ಉರುಳಿದ ಕಾರು; ಮೂವರ ರಕ್ಷಣೆ

02:35 PM Apr 03, 2023 | Team Udayavani |

ಪಣಜಿ: ಕರ್ನಾಟಕ-ಗೋವಾ ಹೆದ್ದಾರಿಯ ಚೋರ್ಲಾ ಘಾಟ್‍ನಲ್ಲಿ ಭಾನುವಾರ ಮಧ್ಯರಾತ್ರಿ ಕಾರೊಂದು ನೇರವಾಗಿ ನಾಲೆಗೆ ಉರುಳಿ ಬಿದ್ದ ಘಟನೆ ನಡೆದಿದ್ದು, ಕಾರಿನಲ್ಲಿ ಸಿಲುಕಿದ್ದ ಮೂವರನ್ನು ಅಗ್ನಿಶಾಮಕ ದಳ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.

Advertisement

ಅಪಘಾತದ ಬಗ್ಗೆ ಮಾಹಿತಿ ಲಭಿಸಿದ ನಂತರ  ವಾಲ್ಪೈ ಅಗ್ನಿಶಾಮಕ ಠಾಣೆಯ ಸಿಬಂದಿ ಕೂಡಲೆ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿ ಮೂವರ ಪ್ರಾಣ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅಂಜುನಾ ಅಣೆಕಟ್ಟು ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರು ನೇರವಾಗಿ ನಾಲೆಗೆ ಬಿದ್ದಿದೆ. ಅಗ್ನಿಶಾಮಕ ದಳದ ಸಿಬಂದಿಗಳಿಗೆ ಮಧ್ಯರಾತ್ರಿ 12.20 ಕ್ಕೆ ಅಪಘಾತದ ಮಾಹಿತಿ ಲಭಿಸಿದೆ ಎನ್ನಲಾಗಿದೆ.  ನಂತರ, ಎಸ್.ಕೆ. ಗಾಂವ್ಕರ್ ನೇತೃತ್ವದ ತಂಡ ಘಟನಾ ಸ್ಥಳಕ್ಕೆ ಧಾವಿಸಿದೆ. ಸಿಬಂದಿಗಳಾದ ಬಾಬುರಾವ್ ಗವಾಸ್, ಸುಧಾಕರ್ ಗಾಂವ್ಕರ್, ಸೋಮನಾಥ ಗಾಂವ್ಕರ್, ಉಮೇಶ್ ಗಾಂವ್ಕರ್ ಮತ್ತು ಫಾತಿ ಕಲ್ಮಿಸ್ಕರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಸ್ಪಾಟ್‍ಲೈಟ್‍ಗಳು ಮತ್ತು ಹಗ್ಗಗಳನ್ನು ಬಳಸಿ, ಅಗ್ನಿಶಾಮಕ ಸಿಬಂದಿ ಕಾರಿನಲ್ಲಿ ಸಿಲುಕಿದ್ದ ಮೂವರನ್ನು ರಕ್ಷಿಸಿದರು. ಅವರನ್ನು ಪ್ರಪಾತದಿಂದ ರಕ್ಷಿಸಿ ಮೇಲಕ್ಕೆ ಕರೆತಂದರು. ಮೂವರು ಪ್ರಯಾಣಿಕರು ಗಾಯಗೊಂಡಿದ್ದಾರೆ. ಅವರನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next