Advertisement

ಆಸ್ಪತ್ರೆಯಿಂದಲೇ ಇಂಟರ್‌ವ್ಯೂ: ಕಣ್ಣು ಮುಚ್ಚಿ ಕೆಲಸ ಕೊಟ್ಟ ಸಿಇಒ

06:40 PM Apr 26, 2022 | Team Udayavani |

ಮುಂಬೈ: ಕ್ಯಾನ್ಸರ್‌ನಿಂದ ಬಳಲಿ, ಕಿಮೋಥೆರಪಿ ಮೂಲಕ ಚೇತರಿಸಿಕೊಳ್ಳುತ್ತಿದ್ದ ವ್ಯಕ್ತಿಯೊಬ್ಬ, ಕೆಲಸಕ್ಕಾಗಿ ಆಸ್ಪತ್ರೆಯಿಂದಲೇ ಕಂಪನಿಗಳ ಸಂದರ್ಶನದಲ್ಲಿ ಭಾಗವಹಿಸುತ್ತಿದ್ದ ಫೋಟೋವೊಂದು ಇತ್ತೀಚೆಗೆ ವೈರಲ್‌ ಆಗಿತ್ತು. ಜಾರ್ಖಂಡ್‌ನ‌ ಅರ್ಷ್‌ ನಂದನ್‌ ಪ್ರಸಾದ್‌ ಆ ಫೋಟೋದಲ್ಲಿ ಕಾಣಿಸಿಕೊಂಡಿದ್ದ ವ್ಯಕ್ತಿಯಾಗಿದ್ದರು.

Advertisement

ಲಿಂಕ್ಡ್ ಇನ್‌ನಲ್ಲಿ ತಮ್ಮ ನೋವಿನ ಕಥೆ ಹೇಳಿಕೊಂಡಿದ್ದ ಅವರು, “ಎಲ್ಲ ರೀತಿಯ ಸಾಮರ್ಥ್ಯವಿದ್ದರೂ, ನಾನು ಕ್ಯಾನ್ಸರ್‌ನಿಂದ ಬಳಲುತ್ತಿದ್ದೇನೆ ಎನ್ನುವ ಒಂದೇ ಕಾರಣಕ್ಕೆ ಎಲ್ಲ ಕಂಪನಿಗಳು ನನ್ನನ್ನು ಕೆಲಸಕ್ಕೆ ತೆಗೆದುಕೊಳ್ಳಲು ನಿರಾಕರಿಸುತ್ತಿವೆ. ನನಗೆ ನಿಮ್ಮ ಕರುಣೆಯ ಅವಶ್ಯಕತೆಯಿಲ್ಲ’ ಎಂದು ಬರೆದುಕೊಂಡಿದ್ದರು.ಅದನ್ನು ಓದಿರುವ ಮುಂಬೈ ಮೂಲಕ ಐಟಿ ಕಂಪನಿಯೊಂದರ ಮುಖ್ಯಸ್ಥನೀಲೇಶ್ ಸತ್ಪುಟೆ,ನಂದನ್‌ ಪ್ರಸಾದ್‌ಗೆ ಕೆಲಸ ಕೊಟ್ಟಿದ್ದಾರೆ.

ಇದನ್ನೂ ಓದಿ:ಒಂದು ವೇಳೆ ಜನರು ನಾರಾಯಣ ಗುರುಗಳ ಸಂದೇಶ ಪಾಲಿಸಿದ್ದರೆ ದೇಶದಲ್ಲಿ ಒಗ್ಗಟ್ಟು: ಪ್ರಧಾನಿ ಮೋದಿ

“ನಿಮ್ಮ ಪ್ರೊಫೈಲ್‌ ನೋಡಿದ್ದೇನೆ. ನಿಮಗೆ ಯಾವಾಗ ಆಗುತ್ತದೆಯೋ ಅಗ ಬಂದು ನನ್ನ ಕಂಪನಿ ಸೇರಿಕೊಳ್ಳಿ. ನಿಮಗೆ ಸಂದರ್ಶನದ ಅವಶ್ಯಕತೆಯಿಲ್ಲ’ ಎಂದು ಹೇಳಿದ್ದಾರೆ. ಈ ವಿಚಾರ ಲಿಂಕ್ಡ್ಇನ್‌ನಲ್ಲಿ ಅನೇಕರ ಮನ ಗೆದ್ದಿದೆ.

Advertisement

Udayavani is now on Telegram. Click here to join our channel and stay updated with the latest news.

Next