Advertisement

ಪೇಜಾವರ ಶ್ರೀಗಳಿಗೆ ರಾಜ್ಯಪಾಲರಿಂದ ಕರೆ

11:16 AM Apr 04, 2020 | Team Udayavani |

ಉಡುಪಿ: ರಾಜ್ಯಪಾಲರು ಗುರುವಾರ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರಿಗೆ ಕರೆ ಮಾಡಿ ಕೋವಿಡ್ 19 ಸೋಂಕು ನಿವಾರಿಸುವ ನಿಟ್ಟಿನಲ್ಲಿ ಮಾರ್ಗದರ್ಶನ ಬಯಸಿದ್ದಾರೆ.

Advertisement

ದೇಶವು ಕೋವಿಡ್ 19 ಹಿಡಿತದಿಂದ ಪಾರಾಗಿ ಜನಜೀವನ ಯಥಾಸ್ಥಿತಿಗೆ ಬರಬೇಕು. ಆ ನೆಲೆ ಯಲ್ಲಿ ನಾಡಿನ ಜನತೆಗೆ ಶ್ರೀಕೃಷ್ಣ ಮಠದ ಭಕ್ತರು, ಶಿಷ್ಯವೃಂದ, ಶ್ರೀಕೃಷ್ಣ ಮಠದ ಮಠಾಧೀಶರಾದ ತಾವು ಮಾರ್ಗದರ್ಶನ ನೀಡಬೇಕು. ಕೇಂದ್ರ, ರಾಜ್ಯ ಸರಕಾರಗಳು ಮತ್ತು ಜಿಲ್ಲಾಡಳಿತಗಳು ಕೈಗೊಳ್ಳುವ ಎಲ್ಲ  ಮುಂಜಾಗ್ರತ ಕ್ರಮಗಳನ್ನು ಅನುಷ್ಠಾನಗೊಳಿಸುವಲ್ಲಿ ಜನರು ಸಹಕಾರ ನೀಡುವಂತೆ ಸಮಸ್ತ ನಾಡಿನ ಜನತೆಗೆ ಸಂದೇಶ ನೀಡಬೇಕು ಎಂದು ಶ್ರೀಗಳಲ್ಲಿ ರಾಜ್ಯಪಾಲರು ಕೇಳಿ ಕೊಂಡಿದ್ದಾರೆ ಎಂದು ಮಠದ ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next