Advertisement

ನಿಂಬೆ ಹಣ್ಣಿನಂತ ಹುಡುಗ

11:14 AM Feb 19, 2020 | mahesh |

ನೀವು ಆಫೀಸಲ್ಲಿ ಕೆಲಸ ಮಾಡುವಾಗ, ಸಣ್ಣಗೆ ಕೆಮ್ಮುವುದು, ನೆಗಡಿಯಿಂದ ನಸ ನಸ ಅನ್ನುವುದು ಆದರೆ, ಎಲ್ಲ ಆಫೀಸಿನ ಎ.ಸಿ ಕಾಟ ಅಂದುಕೊಂಡು ಬಿಡ್ತೀರಿ. ಇದು ನಿಮ್ಮ ದೇಹದಲ್ಲಿನ ರೋಗ ನಿರೋಧಕ ಗುಣ ಕಡಿಮೆ ಆಗುತ್ತಿರುವುದರ ಸೂಚ್ಯಂಕ.ಅದಕ್ಕೆ ಮದ್ದು ನಿಂಬೆ ಹಣ್ಣು. ಇದರಲ್ಲಿ ಸಿಟ್ರಸ್‌ ಅಂಶ ಇರುತ್ತದಂತೆ. ಅಂದರೆ ವಿಟಮಿನ್‌ ಸಿಯನ್ನು ನೇರವಾಗಿ ದೇಹಕ್ಕೆ ತಲುಪಿಸುವುದರಲ್ಲಿ ನಿಂಬೆ ಹಣ್ಣು ಎತ್ತಿದ ಕೈ. ಹೀಗಾಗಿ, ಒಂದು ಸಲ ನಿಂಬೆಹಣ್ಣಿನ ದೇಹಕ್ಕೆ ಹೊಕ್ಕಿದರೆ, ದೇಹದ ರೋಗ ನಿರೋಧಕ ಗುಣವನ್ನು ಹೆಚ್ಚು ಮಾಡುತ್ತದೆ.

Advertisement

ನಿಂಬೆಹಣ್ಣು ದೇಹದ ಜೀರ್ಣಕ್ರಿಯೆ ಚೆನ್ನಾಗಿ ಇಡುವುದರಿಂದ ದೇಹಬಾಧೆಗಳು ಯಾವುದೂ ಇರುವುದಿಲ್ಲ. ಯಕೃತ್‌ ಮೇಲೆ ಬೈಲೆಯನ್ನು ಬಿಡುಗಡೆ ಮಾಡುವುದರಿಂದ ಹೊಟ್ಟೆಯ ತಳಮಳಗಳು ದೂರವಾಗುತ್ತವಂತೆ. ಆಯುರ್ವೇದ ಸಂಶೋಧನೆಗಳು ಹೇಳುವು ಪ್ರಕಾರ, ಪ್ರತಿದಿನ ಬೆಳಗ್ಗೆ ಬಿಸಿನೀರಿಗೆ ನಿಂಬೆ ಹಣ್ಣಿನ ರಸ ಬೆರೆಸಿ ಸೇವಿಸುವುದರಿಂದ ಕ್ಯಾನ್ಸ್‌ರ್‌ ಕಣಗಳು ಹತ್ತಿರ ಕೂಡ ಬರುವುದಿಲ್ಲವಂತೆ. ಹಾಗೆಯೇ, ಈ ನಿಂಬೆಯನ್ನು ಎಳನೀರಿಗೆ ಬೆರೆಸಿ ಕುಡಿಯುವುದರಿಂದ ಸುಸ್ತು, ಅಸಿಡಿಟಿಗಳು ಒಮ್ಮೆಗೆ ಓಡಿಹೋಗುತ್ತವೆ. ದೇಹಕ್ಕೆ ಅಗತ್ಯವಿರುವ ವಿಟಮಿನ್‌ಗಳು ಹೇರಳವಾಗಿ ದೊರಕುತ್ತವಂತೆ ನಿಂಬೆ ಇಂದ.

ಆಫೀಸಲ್ಲಿ ಮಧ್ಯಾಹ್ನ ಟೀ ಬದಲು ಬಿಸಿಬಿಸಿ ನಿಂಬೆ ನೀರು ಕುಡಿದು ನೋಡಿ…

Advertisement

Udayavani is now on Telegram. Click here to join our channel and stay updated with the latest news.

Next