Advertisement

ನಾಗನ ಹೊಟ್ಟೆಯಲ್ಲಿ ಸುಣ್ಣದ ಡಬ್ಬ!

12:52 AM Jun 23, 2023 | Team Udayavani |

ಬಂಟ್ವಾಳ: ವಗ್ಗ ಸಮೀಪದ ಅಲಂಪುರಿ ಸಾಲು ಮರದ ತಿಮ್ಮಕ್ಕ ಉದ್ಯಾನವನದ ಸಮೀಪ ಪತ್ತೆಯಾಗಿದ್ದ ಗಾಯಗೊಂಡ ನಾಗರ ಹಾವಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ್ದು, ಸಂಪೂರ್ಣ ಚೇತರಿಸಿಕೊಂಡ ಬಳಿಕ ಕಾಡಿಗೆ ಬಿಡಲಾಗಿದೆ.

Advertisement

ಅಲಂಪುರಿಯ ವಸಂತಿ ಅವರು ಮನೆ ಸಮೀಪದ ಬಿಲದಲ್ಲಿ ಜೂ. 6ರಂದು ಹಾವೊಂದು ಹೊರಗೆ ಬರಲಾಗದೆ ಒದ್ದಾಡುತ್ತಿರುವುದನ್ನು ಗಮನಿಸಿದ್ದು, ತತ್‌ಕ್ಷಣ ಉರಗ ಪ್ರೇಮಿ ಸ್ನೇಕ್‌ ಕಿರಣ್‌ಗೆ ತಿಳಿಸಿದರು. ಅವರು ಹಾವನ್ನು ಬಿಲದಿಂದ ಹೊರಗೆ ತೆಗೆದು ಪರಿಶೀಲಿಸಿದಾಗ ಹೊಟ್ಟೆ ಹಾಗೂ ಕುತ್ತಿಗೆಯಲ್ಲಿ ಗಾಯ ಕಾಣಿಸಿತು. ಹಾವನ್ನು ಮಂಗಳೂರಿಗೆ ಕೊಂಡು ಹೋಗಿ ಪಶುವೈದ್ಯ ಡಾ| ಯಶಸ್ವಿ ನಾರಾವಿ ಅವರಿಗೆ ತೋರಿಸಿದರು. ವೈದ್ಯರು ಮೊದಲು ಹರಿದ ಚರ್ಮಕ್ಕೆ ಹೊಲಿಗೆ ಹಾಕಿದರಾದರೂ ಹಾವಿನ ಹೊಟ್ಟೆಯಲ್ಲಿ ಏನೋ ಇದೆ ಎಂದು ಸಂಶಯಗೊಂಡು ಶಸ್ತ್ರಚಿಕಿತ್ಸೆ ನಡೆಸಿದರು. ಸುಣ್ಣ ತುಂಬುವ ಪ್ಲಾಸ್ಟಿಕ್‌ ಡಬ್ಬವೊಂದು ಪತ್ತೆಯಾಗಿದ್ದು, ಯಶಸ್ವಿಯಾಗಿ ಹೊರಗೆ ತೆಗೆದರು.

15 ದಿನ ಆಸ್ಪತ್ರೆಯಲ್ಲಿ, ಮೂರು ದಿನ ಮನೆಯಲ್ಲಿ
ವೈದ್ಯರು ಹಾವನ್ನು 15 ದಿನಗಳ ಕಾಲ ತಮ್ಮಲ್ಲೇ ಇರಿಸಿಕೊಂಡು ಪರಿಶೀಲನೆಯ ಬಳಿಕ ಮರಳಿಸಿದರು. ಸ್ನೇಕ್‌ ಕಿರಣ್‌ ಮತ್ತೆ 3 ದಿನ ಮನೆಯಲ್ಲಿರಿಸಿಕೊಂಡು ಬಳಿಕ ಬಂಟ್ವಾಳ ವಲಯ ಅರಣ್ಯಾಧಿಕಾರಿ ರಾಜೇಶ್‌ ಬಳಿಗಾರ್‌ ಹಾಗೂ ರಕ್ಷಕ ಮನೋಜ್‌ ಅವರ ನೆರವಿನಿಂದ ರಕ್ಷಿತಾರಣ್ಯಕ್ಕೆ ಬಿಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next