Advertisement

Siruguppa ಕಬ್ಬಿಣದ ಸರಳಿನಿಂದ ಹೊಡೆದ ಪೆಟ್ಟಿಗೆ ಬಾಲಕ ಸಾವು

05:23 PM Jul 25, 2024 | Team Udayavani |

ಸಿರುಗುಪ್ಪ: ನಗರದ ವಾದಿರಾಜ ನಗರದಲ್ಲಿ ಆಟವಾಡುತ್ತಿದ್ದ ಬಾಲಕನ ಮೇಲೆ ಕಬ್ಬಿಣದ ಸರಳಿನಿಂದ ಹೊಡೆದ ಪರಿಣಾಮ ಬಾಲಕ ಮೃತಪಟ್ಟ ಘಟನೆ ಸಿರುಗುಪ್ಪ ಪೊಲೀಸ್ ರಾಣಿ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಖಾಜಾ ಮೈನುದ್ದೀನ್(14) ಮೃತಪಟ್ಟ ಬಾಲಕ.

ಎಂದಿನಂತೆ ಶಾಲೆಯಿಂದ ಸಂಜೆ ಮನೆಗೆ ಬಂದ ಮಕ್ಕಳು ಬಯಲು ಜಾಗದಲ್ಲಿ ಆಟವಾಡುತ್ತಿದ್ದು, ಈ ಜಾಗದ ಸಮೀಪದಲ್ಲಿ ನೂರ್ ಅಹಮದ್ ಎನ್ನುವ ವ್ಯಕ್ತಿಯು ಮನೆಯನ್ನು ಕಟ್ಟುತ್ತಿದ್ದು,ಇಲ್ಲಿ ಆಟವಾಡಬೇಡಿ ಎಂದು ಮಕ್ಕಳಿಗೆ ಗದರಿದ್ದಾನೆ,ಆದರೆ ಮಕ್ಕಳು ಮಾತು ಕೇಳಲಿಲ್ಲವೆಂದು ಕಬ್ಬಿಣದ ಸರಳಿನಿಂದ ಹೊಡೆದ ಪರಿಣಾಮ ಕತ್ತಿನ ಹಿಂಭಾಗದಲ್ಲಿ ತೀವ್ರವಾಗಿ ಗಾಯಗೊಂಡಿದ್ದು,ಬಾಲಕ ಖಾಜಾ ಮೈನುದ್ದೀನ್ ಮೃತಪಟ್ಟಿದ್ದಾನೆ.

ಬಾಲಕನ ಅಣ್ಣ ಅಕ್ಬರ್ ಸಿರುಗುಪ್ಪ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಬಗ್ಗೆ ನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು , ತನಿಖೆ ನಡೆಸುತ್ತಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next