Advertisement

Ayodhya: 40 ಮನೆಗಳಿಂದ ಉಣ್ಣೆ ಸಂಗ್ರಹಿಸಿ ತಯಾರಿಸಿದ ಕಂಬಳಿ ಅಯೋಧ್ಯೆ ರಾಮಲಲ್ಲಾಗೆ ಅರ್ಪಣೆ

01:05 AM Jan 17, 2024 | Team Udayavani |

ಶಿವಮೊಗ್ಗ: ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಪಗಡಲಬಂಡೆ ಗ್ರಾಮಸ್ಥರು ಅಯೋಧ್ಯೆಯ ಶ್ರೀರಾಮ ಲಲ್ಲಾನಿಗೆ ಅರ್ಪಿಸಲು ಗದ್ದುಗೆ ಕಂಬಳಿಯನ್ನು ಮಾಜಿ ಸಚಿವ ಈಶ್ವರಪ್ಪ ಅವರಿಗೆ ನೀಡಿದರು. ಅಯೋಧ್ಯೆಯ ರಾಮ ಮಂದಿರ ಪ್ರತಿಷ್ಠಾಪನೆ ಸಂದರ್ಭದಲ್ಲಿ ಬಳಸಲು ಗ್ರಾಮದ 40ಕ್ಕೂ ಹೆಚ್ಚು ಮನೆಯಿಂದ ಪವಿತ್ರ ಉಣ್ಣೆಯನ್ನು ಸಂಗ್ರಹಿಸಿ ಕೈಯಿಂದಲೇ ನೇಕಾರರು 3 ದಿನಗಳ ಕಾಲ ಈ ಕರಿ ಕಂಬಳಿ ಯನ್ನು ನೇಯ್ದು ಈಶ್ವರಪ್ಪ ಮೂಲಕ ಶ್ರೀರಾಮಲಲ್ಲಾನಿಗೆ ಸಮರ್ಪಿಸಿದ್ದಾರೆ.

Advertisement

2015ರಲ್ಲಿ ಪ್ರಧಾನಿ ಮೋದಿ ಚಿತ್ರದುರ್ಗಕ್ಕೆ ಆಗಮಿಸಿದಾಗ ಅವರಿಗೆ ಇದೇ ರೀತಿಯ ಕಂಬಳಿಯನ್ನು ನೀಡಿದ್ದೆವು. ನಮಗೆ ಯಾವುದೇ ರಾಜಕೀಯವಿಲ್ಲ. ಆದರೆ ಈ ಪವಿತ್ರ ಕಂಬಳಿ ಯಿಂದ ದೇಶಕ್ಕೆ ಒಳಿತಾಗುತ್ತದೆ ಎಂಬ ನಂಬಿಕೆ ಇದೆ. ಹಾಗಾಗಿ ನಮ್ಮ ಸಮಾಜದ ಎಲ್ಲರ ಅಪೇಕ್ಷೆಯಂತೆ ಈ ಕಂಬಳಿಯನ್ನು ನೀಡುತ್ತಿದ್ದೇವೆ ಎಂದು ಎಂ.ವಿ.ಶಾಂತಕುಮಾರ್‌ ಹೇಳಿದರು. ಮಾಜಿ ಸಚಿವ ಈಶ್ವರಪ್ಪ ಅವರು ಈ ಕಂಬಳಿಯನ್ನು ಸ್ವೀಕರಿಸಿ ಪೋಸ್ಟ್‌ ಮೂಲಕ ಆಯೋಧ್ಯೆಗೆ ಕಳುಹಿಸುವುದಾಗಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next