Advertisement

ಮುಂಬಯಿ ಬಿಜೆಪಿ ಕರ್ನಾಟಕ ಸೆಲ್‌ನಿಂದ ತುಳು-ಕನ್ನಡಿಗರ ವಿಶೇಷ ಸಭೆ

01:38 PM Apr 25, 2019 | Team Udayavani |

ಮುಂಬಯಿ: ಲೋಕಸಭಾ ಚುನಾವಣೆಯ ಅಂಗವಾಗಿ ಬಿಜೆಪಿ ಕರ್ನಾಟಕ ಸೆಲ್‌ ವತಿಯಿಂದ ಎ. 25ರ ಸಂಜೆ 4ರಿಂದ ಬಾಂದ್ರಾ ಹಿಂದು ಅಸೋಸಿಯೇಶನ್‌ ಸಭಾಗೃಹ, ನಿರೊನ್‌ಆಸ್ಪತ್ರೆ ಸಮೀಪ, ಕದಂವಾಡಿ
ವಕೋಲಾ, ಸಾಂತಾಕ್ರೂಜ್‌ ಪೂರ್ವ ಇಲ್ಲಿ ಮುಂಬಯಿ ತುಳು-
ಕನ್ನಡಿಗರ ವಿಶೇಷ ಸಭೆಯೊಂದನ್ನು ಆಯೋಜಿಸಲಾಗಿದೆ.

Advertisement

ಸಭೆಯಲ್ಲಿ ಉತ್ತರ ಮುಂಬಯಿ ಮಧ್ಯ ಲೋಕಸಭಾ ಕ್ಷೇತ್ರದ ಹಾಲಿ ಸಂಸದೆ, ಲೋಕಸಭಾ ಚುನಾವಣಾ ಬಿಜೆಪಿ ಅಭ್ಯರ್ಥಿ ಪೂನಂ ಮಹಾ ಜನ್‌, ಬೆಳ್ತ‌ಂಗಡಿ ವಿಧಾನ ಸಭಾ ಶಾಸಕ ಹರೀಶ್‌ ಪೂಂಜ, ಬಿಜೆಪಿ ಮಹಾರಾಷ್ಟ್ರ ಪ್ರದೇಶ ಕಾರ್ಯಕಾರಿ ಸಮಿತಿಯ ಸದಸ್ಯ ಎಲ್‌. ವಿ. ಅಮೀನ್‌, ಬೊರಿವಲಿ ಸಂಸದ ಗೋಪಾಲ್‌ ಶೆಟ್ಟಿ ತುಳು-ಕನ್ನಡಿಗ ಅಭಿಮಾನಿ ಬಳಗದ ಸಂಚಾಲಕ, ಸಮಾಜ ಸೇವಕ ಎರ್ಮಾಳ್‌ ಹರೀಶ್‌ ಶೆಟ್ಟಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.
ಮಹಾ ನಗರದಲ್ಲಿನ ತುಳು-ಕನ್ನಡಿಗರು ಹೆಚ್ಚಿನ ಸಂಖ್ಯೆ
ಯಲ್ಲಿ ಈ ವಿಶೇಷ ಸಭೆಯಲ್ಲಿ ಪಾಲ್ಗೊಂಡು ಸಭೆಯನ್ನು ಯಶಸ್ವಿಗೊಳಿಸುವಂತೆ ಬಿಜೆಪಿಯ ಕರ್ನಾಟಕ ಸೆಲ್‌ ಮುಂಬಯಿ ಇದರ ಅಧ್ಯಕ್ಷ ಸುರೇಶ್‌ ಅಂಚನ್‌, ಬಿಜೆಪಿ ಮುಂದಾಳುಗಳಾದ ಸುಧೀರ್‌ ಶೆಟ್ಟಿ, ದಿನೇಶ್‌ ಅಮೀನ್‌ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next