Advertisement

Ayodhya: ರಾಮಮಂದಿರಕ್ಕೆ ಬಾಂಬ್‌ ಬೆದರಿಕೆ- 12ರ ಬಾಲಕ ಪೊಲೀಸರ ವಶಕ್ಕೆ

11:53 PM Sep 20, 2023 | Team Udayavani |

ಲಕ್ನೋ: ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ರಾಮ ಮಂದಿರಕ್ಕೆ ಬಾಂಬ್‌ ದಾಳಿಯ ಬೆದರಿಕೆ ಇದೆ ಎಂದು ಕರೆ ಮಾಡಿದ್ದಕ್ಕಾಗಿ 12 ವರ್ಷದ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 112 ತುರ್ತು ಸಂಖ್ಯೆಗೆ ಕರೆ ಮಾಡಿ, ಸೆ.21ರಂದು ರಾಮ ಮಂದಿರದ ಮೇಲೆ ಬಾಂಬ್‌ ದಾಳಿ ನಡೆಸಲಾಗುತ್ತದೆ ಎಂದು ಬೆದರಿಕೆ ಹಾಕಲಾಗಿತ್ತು. ತನಿಖೆಯ ವೇಳೆ ಫ‌ತೇಹ್‌ಗಢದ 12 ವರ್ಷದ ಬಾಲಕ ತನ್ನ ತಂದೆಯ ಫೋನ್‌ನಿಂದ ಈ ರೀತಿ ಬೆದರಿಕೆ ಒಡ್ಡಿರುವುದು ತಿಳಿದುಬಂದಿದೆ.

Advertisement

ಬಾಲಕ, ತಂದೆಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಜಾಲತಾಣದಲ್ಲಿ ಸೆ. 21ರಂದು ಮಂದಿರಕ್ಕೆ ಬಾಂಬ್‌ ದಾಳಿ ನಡೆಸಲಾಗುತ್ತದೆ ಎಂಬ ವೀಡಿ ಯೋ ನೋಡಿದ್ದರ ಬಗ್ಗೆ ತಿಳಿಸಲು ಕರೆ ಮಾಡಿದ್ದೆ ಎಂದು ಬಾಲಕ ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next