Advertisement

98.50 ಲಕ್ಷ ವೆಚ್ಚದಲ್ಲಿ ಕೆರೆ ದುರಸ್ತಿಗೆ ಸಿದ್ದತೆ

03:53 PM Dec 19, 2021 | Team Udayavani |

ಸಿಂಧನೂರು: ನಗರದ 31 ವಾರ್ಡ್‌ಗಳಿಗೆ ಕುಡಿವ ನೀರು ಪೂರೈಸುವ ಬೃಹತ್‌ ಕೆರೆಯ ಬಂಡ್‌ ಕುಸಿದ ಹಿನ್ನೆಲೆಯಲ್ಲಿ ಉಂಟಾಗಿದ್ದ ಆತಂಕ ನಿವಾರಣೆಗೆ ಆಡಳಿತ ವರ್ಗ ಸಜ್ಜಾಗಿದೆ. ನಗರಸಭೆಯ ಆಡಳಿತ ಮಂಡಳಿ ದಿಢೀರ್‌ ಕಾಮಗಾರಿ ಕೈಗೆತ್ತಿಕೊಳ್ಳಲು 98.50 ಲಕ್ಷ ರೂ.ಗಳನ್ನು ಹೊಂದಾಣಿಕೆ ಮಾಡಿದ್ದು, ಕಾಮಗಾರಿ ಕೈಗೆತ್ತಿಕೊಳ್ಳಲು ಜಿಲ್ಲಾಡಳಿತ ಆಡಳಿತಾತ್ಮಕ ಅನುಮೋದನೆ ಒದಗಿಸಿದೆ.

Advertisement

ಕೆರೆಯ ಒಡ್ಡು ಕುಸಿದ ಬಳಿಕ ಎಂಜಿನಿಯರಿಂಗ್‌ ವಿಭಾಗದ ಅಧಿಕಾರಿಗಳ ತಂಡ, ಜನಪ್ರತಿನಿಧಿ ಗಳು ವೀಕ್ಷಣೆ ನಡೆಸಿದ್ದರು. ಶಾಸಕ ವೆಂಕಟರಾವ್‌ ನಾಡಗೌಡ, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಮಾಜಿ ಶಾಸಕ ಹಂಪನಗೌಡ ಬಾದರ್ಲಿ, ನಗರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್‌ ಅವರು ಸ್ಥಳಕ್ಕೆ ಭೇಟಿ ನೀಡಿದ್ದರು. ದುರಸ್ತಿಗೆ ತಾತ್ಕಾಲಿಕವಾಗಿ ನಗರಸಭೆಯಿಂದ ಸಿದ್ಧತೆ ಕೈಗೊಂಡರೂ ಹಣಕಾಸಿನ ಜೋಡಣೆ ಸಮಸ್ಯೆಯಾಗಿತ್ತು. ಇದೀಗ ಇದಕ್ಕೆ ಪರಿಹಾರ ಕಂಡುಕೊಳ್ಳಲಾಗಿದೆ.

ಸಮಸ್ಯೆ ಏನು?

ನಗರದ ಜನಸಂಖ್ಯೆ ಆಧರಿಸಿ 1995ರಲ್ಲಿ 16 ಎಕರೆ ಭೂಮಿಯಲ್ಲಿ ಕೆರೆ ನಿರ್ಮಿಸಲಾಗಿದೆ. ಕೆರೆ ನಿರ್ಮಾಣವಾಗಿ 16 ವರ್ಷದಲ್ಲೇ ಪದೇ ಪದೆ ಕುಸಿತ ಕಂಡು ಬಂದ ಹಿನ್ನೆಲೆಯಲ್ಲಿ ದುರಸ್ತಿ ಚಾಲ್ತಿಯಲ್ಲಿಡಲಾಗಿದೆ. ನವೆಂಬರ್‌ 29, 2021ರಂದು ಹಠಾತ್‌ ಕೆರೆಯ ಉತ್ತರ ಭಾಗದಲ್ಲಿ 80 ಮೀಟರ್‌ ಉದ್ದದಷ್ಟು ಬಂಡ್‌ (ಒಡ್ಡು) ಕುಸಿತವಾಗಿತ್ತು. 70 ಎಂಜಿ ನೀರು ಸಂಗ್ರಹ ಸಾಮರ್ಥ್ಯದಕೆರೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಬಿರುಕು ಬಿಟ್ಟ ಹಿನ್ನೆಲೆಯಲ್ಲಿ ಕುಡಿವ ನೀರು ಸಂಗ್ರಹಕ್ಕೆ ವ್ಯತ್ಯಯವಾಗಿತ್ತು. ಮುಂದಿನ ದಿನಗಳಲ್ಲಿ ನೀರಿನ ಹಾಹಾಕಾರ ತಲೆದೋರುವ ಭೀತಿ ತಲೆದೋರಿತ್ತು.
98.50 ಲಕ್ಷ ರೂ.ಗಳ ಕ್ರಿಯಾ ಯೋಜನೆ

ಕೆಯುಡಬ್ಲ್ಯುಎಸ್‌ ಮತ್ತು ಡಿಬಿ ಇಲಾಖೆಯ ಸಿಇ, ಇಇ ಮತ್ತು ಎಇಇಗಳು ಭೇಟಿ ನೀಡಿದ ವೇಳೆ ದುರಸ್ತಿಗೆ ಕ್ರಿಯಾಯೋಜನೆ ರೂಪಿಸಲು ಒತ್ತಾಯಿಸಲಾಗಿತ್ತು. ಅಧಿಕಾರಿಗಳು 98.50 ಲಕ್ಷ ರೂ.ಅಂದಾಜು ವೆಚ್ಚದಲ್ಲಿ ಒಡ್ಡನ್ನು ದುರಸ್ತಿಗೊಳಿಸುವ ಕುರಿತು ಅಂದಾಜುಪಟ್ಟಿ ಸಿದ್ಧಪಡಿಸಿದ್ದರು. ತುರ್ತು ಕೆಲಸ ಕೈಗೆತ್ತಿಕೊಳ್ಳಲು ನಗರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್‌ ಅವರು, ಸ್ಥಳೀಯ ಆಡಳಿತದಿಂದಲೇ ಹಣ ಜೋಡಿಸಿದ್ದಾರೆ. 2017-18ನೇ ಸಾಲಿನಲ್ಲಿ ಬಂದ 14ನೇ ಹಣಕಾಸು ನಿರ್ವಹಣೆ ಅನುದಾನ 15.23 ಲಕ್ಷ ರೂ., 2018-19ನೇ ಸಾಲಿನ 22.53 ಲಕ್ಷ ರೂ., 2019-20ನೇ ಸಾಲಿನ 17.56 ಲಕ್ಷ ರೂ., 2020-21ನೇ ಸಾಲಿನ 15ನೇ ಹಣಕಾಸು ಯೋಜನೆಯಡಿ 30.68 ಲಕ್ಷ ರೂ., 2021-22ನೇ ಸಾಲಿನ 12.50 ಲಕ್ಷ ರೂ.ಗಳನ್ನು ಜೋಡಿಸಿ ಜಿಲ್ಲಾಧಿಕಾರಿಗಳಿಗೆ ಕ್ರಿಯಾಯೋಜನೆ ಸಲ್ಲಿಸಿದ್ದರು. ಇದಕ್ಕೆ ಜಿಲ್ಲಾಡಳಿತ ಒಪ್ಪಿಗೆ ಸೂಚಿಸಿರುವ ಹಿನ್ನೆಲೆಯಲ್ಲಿ ಟೆಂಡರ್‌ ಕರೆಯಲು ಸಿದ್ಧತೆಗಳು ಭರದಿಂದ ಸಾಗಿವೆ.

Advertisement

ಶಾಸಕರಿಂದಲೂ ತೀವ್ರ ಪ್ರಯತ್ನ ಕರೆ

ಬಂಡ್‌ ದುರಸ್ತಿಗೆ ರಾಜ್ಯ ಸರಕಾರದಿಂದಲೂ ಅನುದಾನ ಬಿಡುಗಡೆ ಮಾಡಿಸಲು ಶಾಸಕ ವೆಂಕಟರಾವ್‌ ನಾಡಗೌಡ ಅವರು ತೀವ್ರ ಪ್ರಯತ್ನ ನಡೆಸಿದ್ದಾರೆ. ಹಣಕಾಸು ಇಲಾಖೆಗೆ ಕ್ರಿಯಾಯೋಜನೆ ಸಲ್ಲಿಕೆಯಾಗಿದ್ದು, ಎರಡು ದಿನದಲ್ಲೇ ಸರಕಾರದಿಂದ ಹಣ ಬಿಡುಗಡೆಯಾಗುವ ನಿರೀಕ್ಷೆ ಹೊಂದಲಾಗಿದೆ. ಈ ಕುರಿತು ಶಾಸಕರು ನಿರಂತರವಾಗಿ ಚರ್ಚೆಯಲ್ಲಿ ತೊಡಗಿದ್ದು, ಈ ಪ್ರಯತ್ನವೂ ಕೂಡ ಚಾಲ್ತಿಯಲ್ಲಿದೆ.

ಕೆರೆ ಒಡ್ಡನ್ನು ದುರಸ್ತಿ ಮಾಡಿಸಲು ಕ್ರಿಯಾಯೋಜನೆ ತಯಾರಿಸಿದ ಬಳಿಕ ಅನುದಾನ ಬಿಡುಗಡೆ ಮಾಡಿಸಲು ಸರಕಾರದ ಮಟ್ಟದಲ್ಲಿ ಪ್ರಯತ್ನಿಸಲಾಗಿದೆ. ಈಗಾಗಲೇ ಚರ್ಚಿಸಿದ್ದು, ಇನ್ನೆರಡು ದಿನದಲ್ಲಿ ಅನುದಾನ ಬರಲಿದೆ. ವೆಂಕಟರಾವ್‌ ನಾಡಗೌಡ, ಶಾಸಕ, ಸಿಂಧನೂರು ನಗರಸಭೆಯಲ್ಲಿ ಉಳಿದ ಅನುದಾನ ಹೊಂದಾಣಿಕೆ ಮಾಡಿಕೊಂಡು ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದೀಗ ಅನುಮೋದನೆ ನೀಡಿರುವುದರಿಂದ ದುರಸ್ತಿಗೆ ಇ-ಟೆಂಡರ್‌ ಕರೆಯಲಾಗುವುದು. ಏಳು ದಿನದಲ್ಲಿ ಕೆಲಸ ಹಂಚಿಕೆಯಾಗಲಿದೆ. -ಮಲ್ಲಿಕಾರ್ಜುನ ಪಾಟೀಲ್‌, ಅಧ್ಯಕ್ಷ, ನಗರಸಭೆ, ಸಿಂಧನೂರು

-ಯಮನಪ್ಪ ಪವಾರ

Advertisement

Udayavani is now on Telegram. Click here to join our channel and stay updated with the latest news.

Next