Advertisement

Thief: 9.23 ಲಕ್ಷ ರೂ. ಮೌಲ್ಯದ ಕಟ್ಟಡ ನಿರ್ಮಾಣ ಸಾಮಗ್ರಿ ಕಳವು

11:54 PM Dec 14, 2023 | Team Udayavani |

ಬಂಟ್ವಾಳ: ಕಟ್ಟಡ ನಿರ್ಮಾಣದ ಗುತ್ತಿಗೆ ವಹಿಸಿಕೊಳ್ಳುತ್ತಿದ್ದ ಎಂಜಿನಿಯರೊಬ್ಬರ ಬಳಿ ಕೆಲಸಕ್ಕಿದ್ದ ಕಾರ್ಮಿಕನೋರ್ವ 9.23 ಲಕ್ಷ ರೂ. ಮೌಲ್ಯದ ಕಟ್ಟಡ ನಿರ್ಮಾಣದ ಸಾಮಗ್ರಿಗಳನ್ನು ಕದ್ದಿರುವ ಘಟನೆ ಪುದು ಗ್ರಾಮದ ಅಮ್ಮೆಮಾರ್‌ನಲ್ಲಿ ನಡೆದಿದೆ.

Advertisement

ಪುದು ಗ್ರಾಮದ ಅಮ್ಮೆಮ್ಮಾರ್‌ ನಿವಾಸಿ ಸಿವಿಲ್‌ ಎಂಜಿನಿಯರ್‌ ಹಮ್ಮಬ್ಬ ಮರ್ಜೂಕ್‌ ಅವರ ಜತೆ ಕೆಲಸ ಮಾಡುತ್ತಿದ್ದ ಶರೂಪ್‌ ಆಲಂ ಕಳವು ಪ್ರಕರಣದ ಆರೋಪಿಯಾಗಿದ್ದಾನೆ. ಹಮ್ಮಬ್ಬ ಅವರು ಬಿಲ್ಡಿಂಗ್‌ ಕೆಲಸಕ್ಕೆ ಉಪಯೋಗಿಸುತ್ತಿದ್ದ ಕಬ್ಬಿಣದ ಶೀಟು, ಜಾಕ್‌, ಸ್ಕಪೋಲ್ಡಿಂಗ್‌ ಇತ್ಯಾದಿಗಳನ್ನು ಅವರ ಮನೆಯ ಪಕ್ಕದ ಶೆಡ್‌ನ‌ಲ್ಲಿ ಇಡುತ್ತಿದ್ದರು. ನ. 24ರಂದು ಅವರು ಬೆಂಗಳೂರಿಗೆ ಹೋಗಿ 27ಕ್ಕೆ ಮರಳಿದ್ದರು. ನ. 29ರಂದು ಶೆಡ್‌ಗೆ ಹೋಗಿ ನೋಡಿದಾಗ ಸೊತ್ತುಗಳು ನಾಪತ್ತೆಯಾಗಿದ್ದವು. ವಿಚಾರಿಸಿದಾಗ ಆರೋಪಿ ಶರೂಪ್‌ ಆಲಂ ಟಾಟಾ ಏಸ್‌ ವಾಹನದ ಮೂಲಕ ಸೊತ್ತುಗಳನ್ನು ಸಾಗಿಸಿರುವುದು ಬೆಳಕಿಗೆ ಬಂದಿದೆ. ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next