Advertisement

ರಾಜಸ್ಥಾನಿ ನಳರಿಂದ ಸಿಹಿಖಾದ್ಯ

10:11 AM Feb 09, 2020 | mahesh |

ಕಲಬುರಗಿ: ಕನ್ನಡಿಗರೊಂದಿಗೆ ಅನ್ಯಭಾಷಿಕರೂ ಕಟ್ಟಿದ ಸಮ್ಮೇಳನ ಇದಾಗಿತ್ತು. ನುಡಿಜಾತ್ರೆಯಲ್ಲಿ ಕನ್ನಡಿಗರ ಬಾಯಿ ಸಿಹಿಮಾಡಿದವರು, ರಾಜಸ್ಥಾನಿ ಮೂಲದ ಬಾಣಸಿಗರು. ಸಿಹಿಖಾದ್ಯ ತಯಾರಿಯ ಉಸ್ತುವಾರಿ ಹೊತ್ತು, ಮೂರು ದಿನ, ಬಗೆಬಗೆಯ ಸಿಹಿತಿನಿಸು ತಯಾರಿಸಿದ್ದರು.

Advertisement

ಬೇರೆಲ್ಲ ಖಾದ್ಯ ತಯಾರಿಕೆಗಿಂತ ಸಿಹಿಖಾದ್ಯ ತಯಾರಿಸುವುದು ಒಂದು ಸವಾಲು. ಸ್ವಲ್ಪ ಅಳತೆ ತಪ್ಪಿದರೂ, ಅದು ಹಳ್ಳ ಹಿಡಿದಂತೆ. ಆದರೆ, ಸಮ್ಮೇಳನದಲ್ಲಿ ಯಾವ ಸಿಹಿಯೂ ಹದಗೆಟ್ಟಿರಲಿಲ್ಲ. ಈ ರಾಜಸ್ಥಾನಿ ಬಾಣಸಿಗರು ಉದ್ಯೋಗ ಅರಸಿಕೊಂಡು, ಎಂಟ್ಟತ್ತು ವರ್ಷಗಳ ಹಿಂದೆಯೇ
ಕರ್ನಾಟಕಕ್ಕೆ ಬಂದವರಂತೆ. ತಮ್ಮ ಕೆಲಸದ ನಡುವೆ ಕನ್ನಡವನ್ನೇ ಆಡುತ್ತಾ, ಮಾದರಿಯಾಗಿದ್ದರು. ಮೈಸೂರು ಪಾಕ, ಬೇಸನ್‌ ಲಾಡು, ಬೂಂದಿ, ಹೆಸರುಬೇಳೆ ಪಾಯಸ, ಶ್ಯಾವಿಗೆ ಪಾಯಸ, ಗೋದಿ ಹುಗ್ಗಿ ಸೇರಿದಂತೆ 8 ಖಾದ್ಯಗಳು ಕನ್ನಡಿಗರ ಹೃದಯ ಗೆದ್ದವು. ಒಟ್ಟು 30 ಸಿಬ್ಬಂದಿ ಕಳೆದ ಮೂರು ದಿನಗಳಿಂದ ಈ ಸಿಹಿಖಾದ್ಯ ತಯಾರಿಕೆಯಲ್ಲಿ ತೊಡಗಿದ್ದರು. ದಿನಕ್ಕೆ 5 ಲಕ್ಷ ಜನರಿಗೆ ಸಿಹಿ ತಯಾರಿಸುವಷ್ಟು ಸಾಮರ್ಥ್ಯ ಹೊಂದಿದ್ದೇವೆ. ಕರ್ನಾಟಕದಲ್ಲಿ ಹಲವು ದೊಡ್ಡ ಕಾರ್ಯಕ್ರಮಗಳಲ್ಲಿ ಬಾಣಸಿಗರಾಗಿ ಸೇವೆ ಸಲ್ಲಿಸಿದ್ದೇವೆ ಎನ್ನುತ್ತಾರೆ ಸಿಹಿ ಖಾದ್ಯ ಪರಿಣತ ಜಬ್ಬರ್‌ ಸಿಂಗ್‌.

Advertisement

Udayavani is now on Telegram. Click here to join our channel and stay updated with the latest news.

Next