Advertisement

Kasaragod ಆನ್‌ಲೈನ್‌ ಟ್ರೇಡಿಂಗ್‌ ಮೂಲಕ 80.49 ಲಕ್ಷ ರೂ. ಲಪಟಾವಣೆ

01:04 AM Jul 27, 2024 | Team Udayavani |

ಕಾಸರಗೋಡು: ಆನ್‌ಲೈನ್‌ ಟ್ರೇಡಿಂಗ್‌ ಮೂಲಕ 80.49 ಲಕ್ಷ ರೂ. ಲಪಟಾಯಿಸಿದ ಪ್ರಕರಣಕ್ಕೆ ಸಂಬಂಧಿಸಿ ವಿದ್ಯಾನಗರ ಪೊಲೀಸರು ಕೇಸು ದಾಖಲಿಸಿದ್ದಾರೆ.

Advertisement

ಹಣ ಕಳೆದುಕೊಂಡ ಪಾಡಿ ಕೊಳಕ್ಕೋಲು ಹೌಸ್‌ನ ಇ. ಶ್ರೀಧರನ್‌ ನೀಡಿದ ದೂರಿನಂತೆ ಎರಡು ಖಾತೆದಾರರ ವಿರುದ್ಧ ವಿದ್ಯಾನಗರ ಪೊಲೀಸರು ಕೇಸು ದಾಖಲಿಸಿ, ಸೈಬರ್‌ ಸೆಲ್‌ನ ಪೊಲೀಸರ ನೆರವಿನಿಂದ ತನಿಖೆ ನಡೆಸಲಾಗುತ್ತಿದೆ.

ಭಾರೀ ಲಾಭ ನೀಡುವುದಾಗಿ ನಂಬಿಸಿ 61 ಧನ್‌ ರೈಸ್‌ ಸೆಕ್ಯೂರಿಟೀಸ್‌ ಲರ್ನಿಂಗ್‌ ಆ್ಯಂಡ್‌ ಗೈಡನ್ಸ್‌ ಎಂಬ ವಾಟ್ಸಪ್‌ ಗ್ರೂಪ್‌ನಲ್ಲಿ ಆನ್‌ಲೈನ್‌ ಟ್ರೇಡಿಂಗ್‌ ವ್ಯವಹಾರದಲ್ಲಿ ಠೇವಣಿ ಮಾಡಿದ್ದಲ್ಲಿ ಭಾರೀ ಲಾಭಾಂಶ ನೀಡುವುದಾಗಿ ತಿಳಿಸಲಾಗಿತ್ತು. ಅದರಂತೆ ಅದರ ಬ್ಯಾಂಕ್‌ ಖಾತೆಗೆ ಮೇ 27ರಿಂದ ಜುಲೈ 15 ರ ತನಕದ ಅವಧಿಯಲ್ಲಿ 80.49 ಲಕ್ಷ ರೂ. ಠೇವಣಿ ರೂಪದಲ್ಲಿ ಹೂಡಿದ್ದಾಗಿ ತಿಳಿಸಿದ್ದಾರೆ. ಆದರೆ ಈ ಹಣಕ್ಕೆ ಲಾಭಾಂಶ ಅಥವಾ ಪಾವತಿಸಿದ ಹಣವನ್ನಾಗಲೀ ನೀಡದೆ ವಂಚಿಸಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next