Advertisement

ವಿಷಾನಿಲ ಸೇವನೆ: 8 ವಿದ್ಯಾರ್ಥಿನಿಯರು ಮೀರತ್‌ ಆಸ್ಪತ್ರೆಗೆ

03:38 PM Oct 13, 2017 | Team Udayavani |

ಮುಜಫ‌ರನಗರ : ಕಳೆದ ಅ.10ರಂದು ತಮ್ಮ  ಶಾಲೆ ಸಮೀಪದ ಸಕ್ಕರೆ ಕಾರ್ಖಾನೆ ಹೊರಸೂಸಿದ ವಿಷಾನಿಲವನ್ನು ಸೇವಿಸಿ ಅಸ್ವಸ್ಥರಾಗಿದ್ದವರ ಪೈಕಿ ಎಂಟು ಮಂದಿ ವಿದ್ಯಾರ್ಥಿನಿಯರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೀರತ್‌ನ ಶಾಮ್ಲಿ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ ಎಂದು ಮುಖ್ಯ ವೈದ್ಯಾಧಿಕಾರಿ (ಸಿಎಂಓ) ರಾಜ್‌ ಕುಮಾರ್‌ ತಿಳಿಸಿದ್ದಾರೆ.

Advertisement

ವಿಷಾನಿಲದಿಂದಾಗಿ ಇಂದು ನಿರಂತರ ನಾಲ್ಕನೇ ದಿನವೂ ಶಾಲೆ ಮುಚ್ಚಿತ್ತು. ವಿಷಾನಿಲ ಸೇವನೆಯಿಂದ 300ಕ್ಕೂ ಅಧಿಕ ಮಂದಿ ಉಸಿರಾಟದ ತೊಂದರೆ, ವಾಂತಿ, ಕಣ್ಣಲ್ಲಿ ಉರಿ ಮುಂತಾದ ತೊಂದರೆಗಳಿಗೆ ಗುರಿಯಾಗಿದ್ದರು. 

ಉ.ಪ್ರ. ಮುಖ್ಯಮಂತ್ರಿ ಆದಿತ್ಯನಾಥ್‌ ಅವರು ಸಹರಣಪುರ ವಿಭಾಗೀಯ ಆಯುಕ್ತರಿಗೆ ಈ ವಿಷಾನಿಲ ಪ್ರಕರಣದ ತನಿಕೆಯನ್ನು ನಡೆಸುವಂತೆ ಆದೇಶಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next