Advertisement

ರಾಷ್ಟ್ರ ಮಟ್ಟದ ಸಂಸ್ಕೃತ ಒಲಂಪಿಯಾಡ್ ಸ್ಫರ್ಧೆಯಲ್ಲಿ ಫಸ್ಟ್ ರ‍್ಯಾಂಕ್ ಗಳಿಸಿದ ಪ್ರಜ್ಞಾ ಭಟ್

07:51 PM Feb 28, 2022 | Team Udayavani |

ನೆಲಮಂಗಲ‌ :  ಸಂಸ್ಕೃತ ಭಾರತಿ ಶೈಕ್ಷಣಿಕ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ ರಾಷ್ಟ್ರ ಮಟ್ಟದ ಏಳನೇ ಸಂಸ್ಕೃತ ಒಲಂಪಿಯಾಡ್ ನಲ್ಲಿ ವಾಗ್ದೇವಿ ವಿಲಾಸ ಶಾಲೆ ನೆಲಮಂಗಲದ ವಿದ್ಯಾರ್ಥಿನಿಯಾದ ಪ್ರಜ್ಞಾ ಭಟ್ ಮೊದಲನೇ ರ‍್ಯಾಂಕ್ ಗಳಿಸಿದ್ದಾಳೆ.

Advertisement

ಸಂಸ್ಕೃತ ಭಾರತಿ ಶೈಕ್ಷಣಿಕ ಟ್ರಸ್ಟ್ ರಾಷ್ಟ್ರಾದ್ಯಂತ ಆರರಿಂದ ಹತ್ತನೇ ತರಗತಿಯ ತನಕ ನಡೆಸುವ ಈ ಸ್ಪರ್ಧೆಯಲ್ಲಿ ಹಲವು ರಾಜ್ಯಗಳ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಳ್ಳುವರು. ಮೂರು ಹಂತಗಳಲ್ಲಿ ನಡೆಯುವ ಈ ಸ್ಪರ್ಧೆಯ‌‌ ಎರಡನೇ ಹಂತದಲ್ಲಿ ನೆಗೆಟಿವ್ ಅಂಕಗಳು ಸಹ ಇರುತ್ತವೆ . ಮೊದಲ ಹಂತದಲ್ಲಿ 96% , ಎರಡನೇ ಹಂತದಲ್ಲಿ97.5 % ಹಾಗೂ ಮೂರನೇ ಹಂತ ಮೌಖಿಕದಲ್ಲೂ ಉತ್ತಮ ಅಂಕಗಳಿಸಿ , ಎಂಟನೇ ತರಗತಿಯ ವಿಭಾಗದಲ್ಲಿ ರಾಷ್ಟ್ರಕ್ಕೇ ಪ್ರಥಮ ಸ್ಥಾನ ಪಡೆದಿರುತ್ತಾಳೆ.

ಈ ಕಾರಣಕ್ಕೆ ವಾಗ್ದೇವಿ ವಿಲಾಸ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಕೆ ಹರೀಶ್  ಅವರು ವಿದ್ಯಾರ್ಥಿನಿಯನ್ನು ಅಭಿನಂದಿಸಿದ್ದಾರೆ. ಮಗಳ ಸಾಧನೆಗೆ ಪಾಲಕರೂ ಹರ್ಷ ವ್ಯಕ್ತ ಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next