Advertisement

ಪುಲ್ವಾಮಾ ಅಟ್ಯಾಕ್‌ : CAPF ಸಿಬಂದಿಗಳಿಗೆ ವಿಮಾನ ಪ್ರಯಾಣ ಸೌಕರ್ಯ

10:25 AM Feb 21, 2019 | udayavani editorial |

ಹೊಸದಿಲ್ಲಿ : ಸಿಆರ್‌ಪಿಎಫ್ ಜವಾನರು ಮತ್ತು ಸಿಎಪಿಎಫ್ ಸಿಬಂದಿಗಳು ಈಗಿನ್ನು ತಮ್ಮ ಕರ್ತವ್ಯಕ್ಕೆ ಹಾಜರಾಗುವಾಗ ಅಥವಾ ರಜೆಯಲ್ಲಿ ಹೋಗುವಾಗ ಜಮ್ಮು-ಶ್ರೀನಗರ ಮತ್ತು ದಿಲ್ಲಿ – ಶ್ರೀನಗರ ಪ್ರಯಾಣವನ್ನು ವಾಣಿಜ್ಯ ವಿಮಾನದಲ್ಲೇ ಕೈಗೊಳ್ಳಬಹುದಾಗಿದೆ. 

Advertisement

ಸಿಆರ್‌ಪಿಎಫ್ ಯೋಧರ ಸುರಕ್ಷೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಕೇಂದ್ರ ಗೃಹ ಸಚಿವಾಲಯ ಅವರ ವಿಮಾನ ಪ್ರಯಾಣ ಅರ್ಹತೆಗೆ ಅನುಮೋದನೆ ನೀಡಿದೆ. 

ಗೃಹ ಸಚಿವಾಲಯದ ಈ ನಿರ್ಧಾರದಿಂದಾಗಿ ಸುಮಾರು 7.8 ಲಕ್ಷ ಸಿಆರ್‌ಪಿಎಫ್ ಸಿಬಂದಿಗಳಿಗೆ ಪ್ರಯೋಜನವಾಗಲಿದೆ. ಈಗಿನ ನಿಯಮಗಳ ಪ್ರಕಾರ ಕೇಂದ್ರ ಸಶಸ್ತ್ರ ಪೊಲೀಸ್‌ ಪಡೆಯ (ಸಿಎಪಿಎಫ್) ಕಾನ್‌ಸ್ಟೆಬಲ್‌, ಹೆಡ್‌ ಕಾನ್‌ಸ್ಟೆಬಲ್‌, ಮತ್ತು ಸಹಾಯಕ ಎಸ್‌ ಐ ಮಟ್ಟದ ಸಿಬಂದಿಗಳಿಗೆ ವಿಮಾನ ಪ್ರಯಾಣದ ಅರ್ಹತೆ ಇಲ್ಲ. 

ಗೃಹ ಸಚಿವಾಲಯದ ಈ ಹೊಸ ಘೋಷಣೆಯ ಪ್ರಕಾರ ಸಿಎಪಿಎಫ್ ಸಿಬಂದಿಗಳು ತಮ್ಮ ಕರ್ತವ್ಯಕ್ಕೆ ಹಾಜರಾಗುವಾಗ ಮತ್ತು ರಜೆಯಲ್ಲಿ ಜಮ್ಮು ಕಾಶ್ಮೀರದಿಂದ ಹೋಗುವಾಗ ಮತ್ತು ಮರಳಿ ಬರುವಾಗ ವಿಮಾನ ಪ್ರಯಾಣದ ಸೌಲಭ್ಯಕ್ಕೆ ಅರ್ಹತೆಯನ್ನು ಹೊಂದಿರುತ್ತಾರೆ.

ಕೇಂದ್ರ ಗೃಹ ಸಚಿವಾಲಯದ ಈ ನಿರ್ಧಾರವನ್ನು ಬಿಎಸ್‌ಎಫ್, ಸಿಆರ್‌ಪಿಎಫ್, ಸಿಐಎಸ್‌ಎಫ್, ಐಟಿಬಿಪಿ ಮತ್ತು ಎಸ್‌ಎಸ್‌ಬಿ ಮುಖ್ಯಸ್ಥರಿಗೆ ತಲುಪಿಸಲಾಗಿದೆ ಮತ್ತು ಇದು ಈ ಕೂಡಲೇ ಜಾರಿಗೆ ಬಂದಿರುತ್ತದೆ ಎಂದು ಇಂದು ಗುರುವಾರ ಸಾರ್ವಜನಿಕರಿಗೆ ಉಪಲಬ್ಧಗೊಳಿಸಲಾಗಿರುವ ಪತ್ರದಲ್ಲಿ   ತಿಳಿಸಲಾಗಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next